Dailyhunt
ಮದುವೆಯ ಕಹಿ ಅನುಭವ ಬಿಚ್ಚಿಟ್ಟ ಗಾಯಕಿ ರಮ್ಯಾ ವಸಿಷ್ಠ

ಮದುವೆಯ ಕಹಿ ಅನುಭವ ಬಿಚ್ಚಿಟ್ಟ ಗಾಯಕಿ ರಮ್ಯಾ ವಸಿಷ್ಠ

Vijay Karnataka 1 week ago

ಕೆಲವರ ಬದುಕಲ್ಲಿ ಮದುವೆ ಎಂಬುವುದು ದೊಡ್ಡ ಪೆಟ್ಟು ಕೊಟ್ಟುಬಿಡುತ್ತದೆ. ಆ ಆಘಾತದಿಂದ ಅವರು ಆಚೆ ಬರೋಕೆ ಅಮೂಲ್ಯವಾದ ಜೀವನ ಮುಡಿಪಾಗಿಡುವ ಪರಿಸ್ಥಿತಿ ಕೂಡ ಬಂದಿರುತ್ತೆ. ಇಂತಹ ಸೂಕ್ಷ್ಮ ವಿಚಾರ ಹೆಚ್ಚಾಗಿ ಸೆಲಿಬ್ರಿಟಿಗಳ ಬದುಕನ್ನೇ ನುಂಗಿವೆ. ನಾಲ್ಕು ಗೋಡೆಗಳ ನಡುವೆ ನಡೆದ ಘಟನೆಗಳು ಕರಾಳ ಅನುಭವ ನೀಡಿದಾಗ, ಮತ್ತೊಬ್ಬರಿಗೆ ಆ ತರಹದ ಸಂಕಷ್ಟಗಳು ಎದುರಿಸಿ ನಿಲ್ಲಲು ಮಾದರಿ ಆಗಬೇಕು ಎಂಬ ಕಾರಣಕ್ಕೆ ತಮ್ಮ ಮದುವೆ, ಡಿವೋರ್ಸ್‌ ಮತ್ತು ಈಗಲೂ ಸಮಾಜದಲ್ಲಿ ಎದುರಾಗುತ್ತಿರುವ ಕೆಟ್ಟ ಅನುಭವಗಳನ್ನ ಗಾಯಕಿ ರಮ್ಯಾ ವಸಿಷ್ಠ ಅವರು ತೆರೆದಿಟ್ಟಿದ್ದಾರೆ.

ನಟ ರಘುರಾಮ್‌ ಅವರು ನಡೆಸಿಕೊಡುವ ನೂರೊಂದು ನೆನಪು ಕಾರ್ಯಕ್ರಮದಲ್ಲಿ ತಮ್ಮ ಮನದಾಳವನ್ನ ಹಂಚಿಕೊಂಡಿದ್ದಾರೆ.

ಗಾಯಕಿ ರಮ್ಯಾ ವಸಿಷ್ಠ ಮಾತು

"ನನ್ನ ಸೋ ಕಾಲ್ಡ್‌ ಮದುವೆ ಅಂತ ಆಯ್ತು, ಅದರ ಒಂದು ತಿಂಗಳ ಹಿಂದೆ ಒಬ್ಬರು ಕಾಮನ್‌ ಫ್ರೆಂಡ್‌ ಕಾಲ್‌ ಮಾಡಿದಾಗ ನಾನೇ ಹೇಳಿದ್ದೆ ಅವರನ್ನ ಯಾರೀ ಮದುವೆ ಆಗ್ತಾರೆ ಅಂತ ಹೇಳಿದ್ದೆ. ಐ ಡೊಂಟ್‌ ನೋ, ನಾನೇ ಮದುವೆ ಆದೆ. ಗೊತ್ತಿಲ್ಲ ನನಗೆ ಅವತ್ತು ಏನಾಗಿತ್ತು ಅಂತ. ನಮ್ಮ ತಾಯಿಗೆ ಇನ್ನು ಸ್ವಲ್ಪ ದಿನ ನೀವು ಅವಳನ್ನ ಅಲ್ಲೆ (ಪತಿ ಮನೆಯಲ್ಲಿ) ಬಿಟ್ರೇ ಅವಳು ಸತ್ತೇ ಹೋಗ್ತಾಳೆ ಅಂತ ಹೇಳಿದ್ರಂತೆ ಸಮ್‌ ಕ್ಲೋಸ್‌ ಇರೋ ಜನ. ನನ್ನ ಜೀವನದ ಅತ್ಯಂತ ಕಷ್ಟದ ದಿನಗಳನ್ನ ನಾನು ನೋಡಿದ್ದೀನಿ. ಈಗ ಒಂದೊಂದೇ ಲಿಂಕ್‌ನ ಕನೆಕ್ಟ್ ಮಾಡ್ತಾ ಹೋದ್ರೇ ಏನೇನೋ ತಲೆಗೆ ಬರುತ್ತೆ. ನಾನು ಬದುಕಿರೋದೇ ಹೆಚ್ಚು ಅಂತ ನನಗೂ ಅನ್ಸುತ್ತೆ. ಅದಾದ ಮೇಲೆ ಆ ವ್ಯಕ್ತಿ ನನ್ನ ಮೇಲೆ ಜಿದ್ದು ಸಾಧಿಸಿರೋದು, ಇಲ್ಲಿಯವರೆಗೂ ಸಾಧಿಸುತ್ತಾ ಇರೋದು… ಸಮಾಜ ನನ್ನನ್ನ ನಡೆಸಿಕೊಂಡ ರೀತಿ.. ಒಂದು ವಿಷಯ ಏನಾಯ್ತು ಅಂದ್ರೆ ಇವರಿಗೇನು ಗೊತ್ತಿರಲಿಲ್ಲವಾ? ಇವರನ್ನ ಯಾರೀ ಹೋಗು ಅಂದಿದ್ದರು ಅಂತಾರೆ. ಆಯ್ತು ನನಗೆ ಗೊತ್ತಿರಲಿಲ್ಲ. ಆತನಿಗೆ ಆತ ಏನು ಅಂತ ಗೊತ್ತಿರಲಿಲ್ಲವಾ? ಏನು ಮಾಡ್ತಿದ್ದಾರೆ? ವಾಟ್‌ ಇಸ್‌ ಇಂಡಸ್ಟ್ರಿ ಡೂಯಿಂಗ್‌? ವೈ ಇಸ್‌ ಇಂಡಸ್ಟ್ರಿ ಸಪೋರ್ಟಿಂಗ್‌ ಸಚ್‌ ಅ ಹಿಪೋಕ್ರೆಟಿಕ್‌ ಪರ್ಸನ್‌? ಐ ಡೊಂಟ್‌ ಅಂಡರ್‌ಸ್ಟ್ಯಾಂಡ್‌.. ಅದಕ್ಕೆ ನಾನು ಈ ಬಗ್ಗೆ ಜಾಸ್ತಿ ಕೇಳೋದು ನಿಲ್ಲಿಸಿಬಿಟ್ಟಿದ್ದೀನಿ ಎಂದು ಮಾಜಿ ಪತಿಯ ವಿರುದ್ಧ ಬೇಸರ ಹೊರ ಹಾಕಿದ್ದಾರೆ ಗಾಯಕಿ ರಮ್ಯಾ ವಸಿಷ್ಠ.

ವಯಸ್ಸು ಚಿಕ್ಕದು

ಆಗ ನನ್ನ ವಯಸ್ಸು ತುಂಬಾ ಚಿಕ್ಕದು. ನನ್ನ ಮೇಲೆ ಸುಳ್ಳು ಕೇಸ್‌ ಎಲ್ಲಾ ಹಾಕಿಸಿದ್ರು. ನಾನು ತುಂಬಾ ರೆಡಿಯೋ ಜಿಂಗಲ್ಸ್‌ ಮಾಡುತ್ತಿದ್ದೆ. ಯಾರಿಗೂ ಮಾಡಿಕೊಟ್ರೇ ಅವರಿಂದ ನನಗೆ ದುಡ್ಡು ಬರೆದೇ ಇರೋ ಹಾಗೆ ಮಾಡೋದು. ತುಂಬಾ ಕಡೆ ಮಾಡಿದ್ದಾರೆ ಈ ರೀತಿ ಎಂದರು ರಮ್ಯಾ.

'ಹೇಗೆ ಎದಿರಿಸಿದ್ರೀ ಚಾಲೆಂಜಸ್‌ನ?' ಎಂದಾಗ, ನಾನು ದೇವರಿಗೆ ಬಿಟ್ಟಿದ್ದೀನಿ. ಇಲ್ಲಿಯತನಕ ಅವನೇ ನನ್ನ ಕಾಪಾಡಿದ್ದು. ಅದೇ ಭರವಸೆಯಲ್ಲಿ ಬದುಕುತ್ತಿದ್ದೇನೆ ಎಂದಿದ್ದಾರೆ ರಮ್ಯಾ ವಸಿಷ್ಠ

'ಹೊಸ ಜೀವನ ಬೇಕು ಅಂತ ಅನಿಸಲಿಲ್ಲವಾ?' ಎಂದಾಗ ಐ ವಾಸ್‌ ಸೋ ಸ್ಕ್ರೇರ್ಡ್. ನಾನು ತುಂಬಾ ಭಯ ಪಟ್ಟಿದ್ದೀನಿ. ಒಬ್ಬ ವ್ಯಕ್ತಿಯ ಹೊರಗಡೆ ತೋರಿಸುವ ಮುಖ ಬೇರೆನೇ, ಒಳಗಡೆ ನೋಡಿದಾಗ ಅಷ್ಟು ಖರಾಳ ಮುಖ. ನನಗಂತೂ ಯಾರಾದರೂ ನಗು ನಗುತ್ತಾ ಮಾತಾಡಿದ್ರೆ ನಂಬೋಕೆ ಆಗಲ್ಲ. ಒಳಗಡೆ ಏನು ಇರುತ್ತೋ ಏನೋ ಅನ್ಸುತ್ತೆ. ಅಷ್ಟು ಭಯ ನನಗೆ. ಆ ಪರಿಸ್ಥಿತಿ ನನ್ನ ಹಂಗ್‌ ಮಾಡಿದೆ. ಅಷ್ಟು ಅನುಭವಿಸಿ ಬಿಟ್ಟಿದ್ದೀನಿ. ಐ ಕಾಂಟ್‌ ಟ್ರಸ್ಟ್‌ ಪೀಪಲ್‌ ಎಂದು ಮದುವೆಯ ಆಘಾತವನ್ನ ಹೇಳಿಕೊಂಡಿದ್ದಾರೆ ಗಾಯಕಿ ರಮ್ಯಾ ವಸಿಷ್ಠ.

'ನಿಮ್ಮ ಕೆರಿಯರ್‌ ಮೇಲೂ ಈ ಘಟನೆ ಇಂಪ್ಯಾಕ್ಟ್ ಮಾಡಿದ್ಯಾ?' ಎಂದು ಕೇಳಿದ್ದಕ್ಕೆ, ತುಂಬಾ ಸಾರಿ. ನನ್ನ ಸುತ್ತ ಇರೋ ಜನ ನನ್ನ ಜೊತೆ ನಿಲ್ತಿಲ್ಲ ಅಂದ್ರೇ ನಾನು ಸರಿಯಿದ್ದೀನಿ ಅಂತ ಅರ್ಥ. ಬದುಕನ್ನ ಈಗ ನೋಡುವ ರೀತಿ ಬದಲಾಗಿದೆ. ಆದರೆ ನನ್ನ ಪ್ರತಿ ಕಾರ್ಯಕ್ರಮದಲ್ಲೂ ಅಡ್ಡಗಾಲಿದೆ. ಒಂದು ಕಾರ್ಯಕ್ರಮ ಮಾಡಿದ್ದೆ. ಆ ಕಾರ್ಯಕ್ರಮದ ವಿಡಿಯೋ ತೆಗೆಯಲು..ಇವರ ಸ್ನೇಹಿತರೋಬ್ಬರನ್ನ ನಂಬಿ, ಪೂರ್ತಿ ಹಣ ಪೇ ಮಾಡಿದ್ದೆ. ಅವರ ನನಗೂ ಸ್ನೇಹಿತರಲ್ಲಾ ಅಂತ ನಂಬಿ ಕಾಂಟ್ರಾಕ್ಟ್‌ ಕೊಟ್ಟಿದ್ದೆ. ಆದರೆ ಇದುವರೆಗೂ ಅದರ ಒಂದು ಸಣ್ಣ ತುಣುಕು, ವಿಡಿಯೋ ನನಗೆ ಕೊಟ್ಟಿಲ್ಲ. ಇದಕ್ಕೆ ಏನು ಹೇಳ್ತೀರಾ? ಎಂದು ಮಾಜಿ ಪತಿ ಮಾಡಿದ ಅನ್ಯಾಯದ ಬಗ್ಗೆ ತಮ್ಮ ನೋವು ತೋಡಿಕೊಂಡಿದ್ದಾರೆ ಗಾಯಕಿ ರಮ್ಯಾ.

'ರಮ್ಯಾ ಅವರು ತುಂಬಾ ಆಲಿಮನಿ ಕಲೆಕ್ಟ್ ಮಾಡಿದ್ದಾರೆ, ತುಂಬಾ ದುಡ್ಡು ತಗೊಂಡುಬಿಟ್ಟಿದ್ದಾರೆ ಎಂಬ ಮಾತಿದೆ. ಇದು ಸತ್ಯನಾ?' ಎಂಬ ಪ್ರಶ್ನೆಗೆ-
ನಾನು ಒಂದು ರೂಪಾಯಿಯೂ ತಗೊಂಡಿಲ್ಲ. ಇನ್‌ಫ್ಯಾಕ್ಟ್‌ ನಾನು ಮಾಡಿದ ಕಾರ್ಯಕ್ರಮಗಳ ದುಡ್ಡು ಅವರ ಅಕೌಂಟ್‌ಗೆ ಹೋಗಿ ಬಿದ್ದಿದೆ. ಅದನ್ನ ನನಗೆ ಕೊಟ್ಟಿಲ್ಲ. ಸೀ ಆ ವ್ಯಕ್ತಿ ಅವರ ಮನೆಗೆ ಹೋಗ್ಬೇಕು ಏನೋ ಅಂದಾಗಲೂ ನಾನೇ ಪ್ಯಾಕ್‌ ಮಾಡಿ ಕೊಟ್ಟಿದ್ದೀನಿ ಎಲ್ಲಾನೂ. ಚಿಕ್ಕ ಚಿಕ್ಕ ಟ್ರಾವೆಲ್‌ ಬ್ಯಾಗ್‌ ಬರುತ್ತಲ್ಲಾ.. ಅದರಲ್ಲಿ ಕ್ಯಾಶ್‌ ತುಂಬಿ ಕೊಟ್ಟಿದ್ದೀನಿ. ಅವರ ಒಂದೇ ಒಂದು ರೂಪಾಯಿನೂ ನಾನು ಟಚ್‌ ಮಾಡಿಲ್ಲ. ನಾನು ತಗೊಂಡಿದ್ದೀನಿ ಅನ್ನೋದನ್ನ ಪ್ರೂವ್‌ ಮಾಡಲಿ ಎಂದು ಸವಾಲ್‌ ಹಾಕಿದ್ದಾರೆ ಗಾಯಕಿ ರಮ್ಯಾ ವಸಿಷ್ಠ ಅವರು.


ನನ್ನ ಇಡೀ ಈ ಘಟನೆ ಏನು ನಡಿಯಿತೋ, ನಾನು ನ್ಯಾಯಕ್ಕಾಗಿ ವಾಯ್ಸ್ ರೈಸ್‌ ಮಾಡಿದ್ದನ್ನ, ಓಹೋ.. ಇವಳು ಸೆಕ್ಸ್‌ಗೋಸ್ಕರ ಇದನ್ನಲ್ಲಾ ಮಾಡ್ತಿದ್ದಾಳೆ ಅಂತ ನನ್ನ ಲೇಬಲ್‌ ಮಾಡೋಕೆ ಶುರು ಮಾಡಿದ್ರು. ಅಂಡ್‌ ಈ ತರಹ ಒಬ್ಬ ವ್ಯಕ್ತಿ. ಈ ವ್ಯಕ್ತಿಯ ನೂನ್ಯತೆಗಳು ಇದು ಅಂತ ನಾನು ಹೇಳಿದ ತಕ್ಷಣ, ಆ ಕ್ಯಾಟಗರಿಗೆ ಬರುವ ಎಲ್ಲಾ ಗಂಡಸರು ನನ್ನ ವಿರುದ್ಧ ಆಗಿಬಿಟ್ಟರು ಎಂದು ರಮ್ಯಾ ವಸಿಷ್ಠ ಅವರು ತಮಗಾದ ಅನ್ಯಾಯವನ್ನ ಬಿಚ್ಚಿಟ್ಟಿದ್ದಾರೆ. ಈ ಎಲ್ಲಾ ಸಂಭಾಷಣೆ ನಟ ರಘುರಾಮ್‌ ಅವರ ನೂರೊಂದು ನೆನಪು ಕಾರ್ಯಕ್ರಮದ ಸಂದರ್ಶನದಲ್ಲಿ ಇದೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka