Dailyhunt Logo
  • Light mode
    Follow system
    Dark mode
    • Play Story
    • App Story
ಶ್ರೀಕೃಷ್ಣನು ನಿಮ್ಮನ್ನು ಪರೀಕ್ಷಿಸುತ್ತಿದ್ದರೆ ಈ 8 ಸೂಚನೆಗಳು ಸಿಗುತ್ತೆ.!

ಶ್ರೀಕೃಷ್ಣನು ನಿಮ್ಮನ್ನು ಪರೀಕ್ಷಿಸುತ್ತಿದ್ದರೆ ಈ 8 ಸೂಚನೆಗಳು ಸಿಗುತ್ತೆ.!

Vijay Karnataka 4 months ago

ಕೃಷ್ಣನು ನಮಗೆ ಒಳ್ಳೆಯದನ್ನು ಮಾಡಲಿ ಅಥವಾ ಕೆಟ್ಟದ್ದನ್ನು ಮಾಡಲಿ ಅದು ನಮ್ಮ ಕರ್ಮಾಧಾರಿತವಾಗಿರುತ್ತದೆ. ಶ್ರೀಕೃಷ್ಣನು ನಮಗೆ ಏನನ್ನೇ ನೀಡಲು ಬಯಸಿದರೂ ಮೊದಲು ನಮ್ಮನ್ನು ನಿರಂತರವಾಗಿ ಪರೀಕ್ಷಿಸುತ್ತಾನೆ. ನಂತರ ಅದನ್ನು ನಮಗೆ ಕೊಡುಗೆಯಾಗಿ ನೀಡುತ್ತಾನೆ. ಅದು ಸುಖವಾದರೂ ಅಷ್ಟೇ, ದುಃಖವಾದರೂ ಅಷ್ಟೇ.

ಶ್ರೀಕೃಷ್ಣನು ನಮ್ಮನ್ನು ಪರೀಕ್ಷಿಸುತ್ತಿದ್ದಾನೆಯೇ.? ಇಲ್ಲವೇ.? ಎಂದು ತಿಳಿದುಕೊಳ್ಳುವುದು ಹೇಗೆ.?


ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನು ಅರ್ಜುನನಿಗೆ ತಾಳ್ಮೆ ದೌರ್ಬಲ್ಯವಲ್ಲ. ಅದೊಂದು ''ಆಧ್ಯಾತ್ಮಿಕ ಶಕ್ತಿ''ಯೆಂದು ಹೇಳಿದ್ದಾನೆ. ಶ್ರೀಕೃಷ್ಣ ನಿಮ್ಮನ್ನು ಪ್ರತಿಯೊಂದು ಹಂತದಲ್ಲೂ ಪರೀಕ್ಷಿಸುತ್ತಿದ್ದಾನೆ ಎಂದರೆ ಅದು ಅವನು ನಿಮಗೆ ಶಿಕ್ಷೆಯನ್ನು ನೀಡುವುದಕ್ಕಾಗಿ ಆಗಿರುವುದಿಲ್ಲ. ಬದಲಾಗಿ, ನಿಮ್ಮನ್ನು ಸದೃಢರನ್ನಾಗಿ ಮಾಡುವ ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತದೆ. ನಿಮ್ಮ ಹಣೆಬರಹವನ್ನು ಅಥವಾ ನಿಮ್ಮ ಅದೃಷ್ಟವನ್ನು ಬದಲಾಯಿಸುವ ಮೊದಲು ಅವನು ನಿಮ್ಮ ನಂಬಿಕೆಯನ್ನು ವಿಸ್ತರಿಸುತ್ತಾನೆ. ಆತ್ಮವು ತಾಳ್ಮೆಯಿಂದ ಕಾಯುವಿಕೆಯ ಮೂಲಕ ಮತ್ತಷ್ಟು ಶಕ್ತಿಯುತವಾಗುವುದು. ಕೃಷ್ಣನು ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದರೆ ಈ ಸೂಚನೆಗಳ ಮೂಲಕ ಅದನ್ನು ತಿಳಿದುಕೊಳ್ಳಬಹುದು.ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನು ಅರ್ಜುನನಿಗೆ ತಾಳ್ಮೆ ದೌರ್ಬಲ್ಯವಲ್ಲ. ಅದೊಂದು ''ಆಧ್ಯಾತ್ಮಿಕ ಶಕ್ತಿ''ಯೆಂದು ಹೇಳಿದ್ದಾನೆ. ಶ್ರೀಕೃಷ್ಣ ನಿಮ್ಮನ್ನು ಪ್ರತಿಯೊಂದು ಹಂತದಲ್ಲೂ ಪರೀಕ್ಷಿಸುತ್ತಿದ್ದಾನೆ ಎಂದರೆ ಅದು ಅವನು ನಿಮಗೆ ಶಿಕ್ಷೆಯನ್ನು ನೀಡುವುದಕ್ಕಾಗಿ ಆಗಿರುವುದಿಲ್ಲ. ಬದಲಾಗಿ, ನಿಮ್ಮನ್ನು ಸದೃಢರನ್ನಾಗಿ ಮಾಡುವ ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತದೆ. ನಿಮ್ಮ ಹಣೆಬರಹವನ್ನು ಅಥವಾ ನಿಮ್ಮ ಅದೃಷ್ಟವನ್ನು ಬದಲಾಯಿಸುವ ಮೊದಲು ಅವನು ನಿಮ್ಮ ನಂಬಿಕೆಯನ್ನು ವಿಸ್ತರಿಸುತ್ತಾನೆ. ಆತ್ಮವು ತಾಳ್ಮೆಯಿಂದ ಕಾಯುವಿಕೆಯ ಮೂಲಕ ಮತ್ತಷ್ಟು ಶಕ್ತಿಯುತವಾಗುವುದು. ಕೃಷ್ಣನು ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದರೆ ಈ ಸೂಚನೆಗಳ ಮೂಲಕ ಅದನ್ನು ತಿಳಿದುಕೊಳ್ಳಬಹುದು.ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನು ಅರ್ಜುನನಿಗೆ ತಾಳ್ಮೆ ದೌರ್ಬಲ್ಯವಲ್ಲ. ಅದೊಂದು ''ಆಧ್ಯಾತ್ಮಿಕ ಶಕ್ತಿ''ಯೆಂದು ಹೇಳಿದ್ದಾನೆ. ಶ್ರೀಕೃಷ್ಣ ನಿಮ್ಮನ್ನು ಪ್ರತಿಯೊಂದು ಹಂತದಲ್ಲೂ ಪರೀಕ್ಷಿಸುತ್ತಿದ್ದಾನೆ ಎಂದರೆ ಅದು ಅವನು ನಿಮಗೆ ಶಿಕ್ಷೆಯನ್ನು ನೀಡುವುದಕ್ಕಾಗಿ ಆಗಿರುವುದಿಲ್ಲ. ಬದಲಾಗಿ, ನಿಮ್ಮನ್ನು ಸದೃಢರನ್ನಾಗಿ ಮಾಡುವ ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತದೆ. ನಿಮ್ಮ ಹಣೆಬರಹವನ್ನು ಅಥವಾ ನಿಮ್ಮ ಅದೃಷ್ಟವನ್ನು ಬದಲಾಯಿಸುವ ಮೊದಲು ಅವನು ನಿಮ್ಮ ನಂಬಿಕೆಯನ್ನು ವಿಸ್ತರಿಸುತ್ತಾನೆ. ಆತ್ಮವು ತಾಳ್ಮೆಯಿಂದ ಕಾಯುವಿಕೆಯ ಮೂಲಕ ಮತ್ತಷ್ಟು ಶಕ್ತಿಯುತವಾಗುವುದು. ಕೃಷ್ಣನು ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದರೆ ಈ ಸೂಚನೆಗಳ ಮೂಲಕ ಅದನ್ನು ತಿಳಿದುಕೊಳ್ಳಬಹುದು.ಅನಿರೀಕ್ಷಿತ ಅಡೆತಡೆಗಳು

ಕೆಲವೊಮ್ಮೆ, ಜೀವನವು ಸುಗಮವಾಗಿ ಸಾಗುತ್ತಿದೆ, ಹಠಾತ್ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮಹಾಭಾರತದಲ್ಲಿ, ಕೃಷ್ಣನು ಪಾಂಡವರಿಗೆ ವನವಾಸವನ್ನು ಎದುರಿಸಲು ಅವಕಾಶ ಮಾಡಿಕೊಟ್ಟನು. ಯಾಕೆಂದರೆ ಅವರನ್ನು ಮುಂದಿನ ಸಮಸ್ಯೆಗಳಿಗೆ ಸಿದ್ಧರಾಗುವಂತೆ ಮಾಡಬೇಕಾಗಿತ್ತು. ಸವಾಲುಗಳನ್ನು ಎದುರಿಸುವ ಧೈರ್ಯ ಅವರಲ್ಲಿ ಬರಬೇಕಿತ್ತು. ನಿಮ್ಮ ಜೀವನದಲ್ಲೂ ಇದ್ದಕ್ಕಿದ್ದಂತೆ ಅಡೆತಡೆಗಳು ಪದೇ ಪದೇ ಎದುರಾಗುತ್ತಿದ್ದರೆ ಕೃಷ್ಣನು ನಿಮ್ಮ ಆಂತರಿಕ ಧೈರ್ಯವನ್ನು ಬಲಪಡಿಸುತ್ತಿರಬಹುದು ಎಂಬುದನ್ನು ಅರಿತುಕೊಳ್ಳಿ. ಉದಾಹರಣೆಗೆ ನಾವು ಬರೆಯುವಂತಹ ಪರೀಕ್ಷೆಗಳು ನಮ್ಮ ಶೈಕ್ಷಣಿಕ ಜೀವನದಲ್ಲಿ ಬಂದಿರುವ ಅಡೆತಡೆಗಳಲ್ಲ. ಬದಲಾಗಿ, ಅವುಗಳು ನಮ್ಮನ್ನು ಮತ್ತಷ್ಟು ಬುದ್ಧಿವಂತರನ್ನಾಗಿ ಮಾಡುವ, ಜ್ಞಾನವನ್ನು ವೃದ್ಧಿಸುವ, ನಮ್ಮ ಸಾಮರ್ಥ್ಯವನ್ನು ತಿಳಿದುಕೊಳ್ಳುವ ಮಾರ್ಗವಾಗಿದೆ.

PC: pexel


ಪ್ರಾರ್ಥನೆಯಲ್ಲಿನ ಮೌನ ನಂಬಿಕೆಯ ಪಾಠವಾಗಿದೆ

ದೇವರನ್ನು ಪ್ರಾರ್ಥಿಸಿದ ಸಮಯದಲ್ಲಿ ದೇವರು ನೇರವಾಗಿ ಬಂದು ನಿಮ್ಮ ಭಾವನೆಗಳಿಗೆ ಸ್ಪಂಧಿಸುವುದಿಲ್ಲ. ದೇವರು ಮೌನವಾಗಿದ್ದಾನೆ ಎಂದರೆ ಅದು ಅವನ ಅನುಪಸ್ಥಿತಿ ಎಂದಲ್ಲ. ದೇವರು ನಮ್ಮ ಹೃದಯದಲ್ಲಿ ವಾಸವಾಗಿದ್ದಾನೆ. ಅವನು ನಮಗೆ ಭಾವನೆಗಳಿಗೆ ತ್ವರಿತ ಉತ್ತರವನ್ನು ನೀಡುವುದಕ್ಕಿಂತ ಆಳವಾದ ನಂಬಿಕೆಯನ್ನು, ಭಕ್ತಿಯನ್ನು ಕಲಿಸುತ್ತಾನೆ. ನೀವು ಚಿಹ್ನೆಗಳಿಲ್ಲದೆ ಪ್ರಾರ್ಥಿಸುವುದನ್ನು ಮುಂದುವರಿಸಿದಾಗ, ನೀವು ಆಧ್ಯಾತ್ಮಿಕವಾಗಿ ಬೆಳೆಯುತ್ತಿದ್ದೀರಿ ಎಂದರ್ಥ. ಪುರಾವೆಗಳಿಲ್ಲದ ನಂಬಿಕೆಯು ಶುದ್ಧ ಭಕ್ತಿಯಾಗಿದೆ. ನೀವು ನೋಡಲು ಸಾಧ್ಯವಾಗದಿದ್ದರೂ ಸಹ ನಂಬಲು ಕೃಷ್ಣ ನಿಮಗೆ ಕಲಿಸುತ್ತಿರಬಹುದು.PC: pexel


ಇತರರ ಯಶಸ್ಸನ್ನು ನಿಮ್ಮ ಮುಂದಿಡುವುದು

ನಮಗಿಂತ ಇತರರು ವೇಗವಾಗಿ ಯಶಸ್ವಿಯಾಗುತ್ತಿರುವುದನ್ನು ನೋಡಿದಾಗ ಅದು ನಮಗೆ ಒಂದಿಷ್ಟು ನೋವನ್ನು ನೀಡಬಹುದು ಅಥವಾ ಬೇಸರವನ್ನುಂಟು ಮಾಡಬಹುದು. ಅಸಮಾಧಾನ, ಅನುಮಾನ ಬೆಳೆಯಬಹುದು. ಕೃಷ್ಣನು ನಿಮ್ಮನ್ನು ಯಶಸ್ವಿ ವ್ಯಕ್ತಿಯೊಂದಿಗೆ ಹೋಲಿಸುವ ಮೂಲಕ ನಿರ್ಲಿಪ್ತತೆಯನ್ನು ಕಲಿಸುತ್ತಾನೆ. ಪ್ರತಿಯೊಬ್ಬರೂ ವಿಶಿಷ್ಟವಾದ ಕರ್ಮ ಮಾರ್ಗದಲ್ಲಿ ನಡೆಯುತ್ತಿರುತ್ತಾರೆ. ನಿಮ್ಮ ಕರ್ಮ ಮಾರ್ಗವೇ ಭಿನ್ನವಾಗಿಬಹುದು. ಅವರ ಕರ್ಮ ಮಾರ್ಗವೇ ಭಿನ್ನವಾಗಿರಬಹುದು. ನೀವು ಯಶಸ್ಸಿಗಾಗಿ ಕಾಯುತ್ತಿರುವಾಗ ಇತರರ ಯಶಸ್ಸನ್ನು ನಿಮ್ಮ ಮುಂದೆ ತಂದಿಡುವುದು ಅವನು ನಿಮಗೆ ನಮ್ರತೆ ಮತ್ತು ಗಮನವನ್ನು ಕಲಿಸುವ ಮಾರ್ಗವಾಗಿರಬಹುದು. ಈ ಮೂಲಕ ಅವನು ನಿಮಗೆ ನೀವು ಇನ್ನು ಯಶಸ್ಸನ್ನು ಗಳಿಸಲು ಪೂರ್ಣವಾಗಿ ಸಿದ್ದವಾಗಿಲ್ಲ ಎಂಬುದನ್ನು ಸೂಚಿಸುತ್ತಾನೆ.

PC: pexel


ಪ್ರಗತಿಗೂ ಮೊದಲು ಸಮಸ್ಯೆಗಳು ಸಾಮಾನ್ಯ

ಜೀವನದಲ್ಲಿ ಪ್ರಮುಖ ಬದಲಾವಣೆಯನ್ನು ಪಡೆದುಕೊಳ್ಳುವುದಕ್ಕೂ ಮೊದಲು, ಜೀವನವು ಆಗಾಗ್ಗೆ ಅನಾನುಕೂಲತೆಯನ್ನು ಅನುಭವಿಸುತ್ತದೆ. ನೀವು ಪ್ರಕ್ಷುಬ್ಧತೆ, ಭಾವನಾತ್ಮಕ ಅಥವಾ ಅನಿಶ್ಚಿತತೆಯನ್ನು ಅನುಭವಿಸಬಹುದು. ಅನೇಕ ಕೃಷ್ಣ ಕಥೆಗಳಲ್ಲಿ, ರೂಪಾಂತರವು ಅವ್ಯವಸ್ಥೆಯಲ್ಲಿ ಪ್ರಾರಂಭವಾಗುತ್ತದೆ. ಈ ಆಂತರಿಕ ನಡುಕವು ಆಧ್ಯಾತ್ಮಿಕ ಬದಲಾವಣೆಯಾಗಿದೆ. ಹಳೆಯ ಅಭ್ಯಾಸಗಳು ಮರೆಯಾಗುತ್ತವೆ. ಹಳೆಯ ನಂಬಿಕೆಗಳು ಮಾಸುತ್ತದೆ. ಸೂರ್ಯೋದಯಕ್ಕೆ ಸ್ವಲ್ಪ ಮೊದಲು, ರಾತ್ರಿ ಕತ್ತಲೆಯಾಗಿ ಭಾಸವಾಗುತ್ತದೆ. ಆ ಅಸ್ವಸ್ಥತೆ ವಿನಾಶವಲ್ಲ ಅದು ಸೂರ್ಯನ, ಹೊಸ ದಿನದ ಪುನರ್ಜನ್ಮವಾಗಿರುತ್ತದೆ. ಅದೇ ರೀತಿ ಪ್ರಗತಿಯನ್ನು ಸಾಧಿಸುವುದಕ್ಕೂ ಮೊದಲು ಆಂತರಿಕ ಚಡಪಡಿಕೆ, ಅನಾನುಕೂಲತೆ ಸಾಮಾನ್ಯವಾಗಿರುತ್ತದೆ.PC: pexel


ಸಮಸ್ಯೆಗಳು ಪುನರಾವರ್ತನೆಯಾದರೆ ಪಾಠ ಕಲಿತಿಲ್ಲ ಎಂದರ್ಥ

ನಮಗೆ ಪದೇ ಪದೇ ಎದುರಾಗುವ ಸಮಸ್ಯೆಗಳು ಒಂದೇ ಆಗಿರಬಹುದು ಆದರೆ ಅದು ವಿಭಿನ್ನ ರೂಪದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭವಾಗುವುದು. ಅವುಗಳು ಒಂದೇ ರೀತಿಯ ಸಂಘರ್ಷವನ್ನು, ಭಯವನ್ನು ಮತ್ತು ನಿರಾಸೆಯನ್ನು ತಂದೊಡ್ಡುತ್ತದೆ. ಕೃಷ್ಣನ ಬೋಧನೆಗಳು ನಮಗೆ ನಮ್ಮ ಕರ್ಮ ಮತ್ತು ಅದರಿಂದ ಕಲಿಯಬೇಕಾದ ಪಾಠದ ಬಗ್ಗೆ ಒತ್ತಿ ಹೇಳುತ್ತದೆ. ಪಾಠಗಳು ಪುನರಾವರ್ತನೆಯಾದಾಗ, ತಿಳುವಳಿಕೆ ಅಪೂರ್ಣವಾಗಿದೆ ಎಂದರ್ಥ. ಅದೇ ನಮ್ಮ ಸಮಸ್ಯೆಗಳಿಗೆ ಬಂದಾಗ ಆ ಸಮಸ್ಯೆಗಳಿಂದ ಕಲಿತ ಪಾಠ ಇನ್ನೂ ಅಪೂರ್ಣವೆಂಬುದಾಗಿದೆ. ಸಮಸ್ಯೆಗಳಿಂದ ಪಾಠ ಕಲಿಯುವವರೆಗೆ ಆ ಸಮಸ್ಯೆ ಪುನರಾವರ್ತನೆಯಾಗುತ್ತಲೇ ಇರುತ್ತದೆ. "ನನಗೆ ಏಕೆ ಇಷ್ಟೊಂದು ಸಮಸ್ಯೆಗಳು.?" ಎಂದು ಕೇಳುವ ಬದಲು, "ಈ ಸಮಸ್ಯೆಯಿಂದ ನಾನು ಏನನ್ನು ಕಲಿಯಬಹುದು.?" ಎಂದು ಪ್ರಶ್ನಿಸಿಕೊಂಡರೆ ತಾಳ್ಮೆ ತಾನಾಗಿಯೇ ಬೆಳೆಯುವುದು. ಸ್ವೀಕಾರವು ಹತಾಶೆಯನ್ನು ಬದಲಾಯಿಸಿದಾಗ ಬೆಳವಣಿಗೆ ಪ್ರಾರಂಭವಾಗುತ್ತದೆ.PC: pexel


ಸಮಸ್ಯೆಗಳ ಸಾಗರದಲ್ಲೂ ಶಾಂತಿ ಕಾಯ್ದುಕೊಳ್ಳುವುದು

ತೊಂದರೆಗಳು ಉಲ್ಭಣಗೊಂಡ ಸಮಯದಲ್ಲಿ ಅನಿರೀಕ್ಷಿತ ಶಾಂತತೆಯು ಅತ್ಯಂತ ಶಕ್ತಿಶಾಲಿ ಸಂಕೇತವಾಗಿದೆ. ಸಮಸ್ಯೆಗಳು ಅಸ್ತಿತ್ವದಲ್ಲಿದ್ದರೂ ಭಯ ಕಣ್ಮರೆಯಾದಾಗ, ಕೃಷ್ಣನ ಅನುಗ್ರಹವು ನಮ್ಮ ಮೇಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ನಿಜವಾದ ತಾಳ್ಮೆ ಕೋಪದಿಂದ ಹೊರಬರುವುದಿಲ್ಲ. ಅದು ಶಾಂತಿಯುತವಾದ ನಂಬಿಕೆಯನ್ನು ತರುತ್ತದೆ. ನಿಮ್ಮ ಹೃದಯವು ಅನಿಶ್ಚಿತತೆಯಲ್ಲೂ ಸ್ಥಿರವಾಗಿದ್ದರೆ, ಕೃಷ್ಣನು ಆಧ್ಯಾತ್ಮಿಕ ಪರಿಪಕ್ವತೆಯನ್ನು ನೀಡುತ್ತಿದ್ದಾನೆ ಎಂದರ್ಥ. ಈ ಶಾಂತ ಶಕ್ತಿಯು ದೈವಿಕ ರಕ್ಷಣೆಯಾಗಿದೆ. ಇದರರ್ಥ ನೀವು ಇನ್ನು ಮುಂದೆ ಸಂದರ್ಭಗಳಿಂದ ನಿಯಂತ್ರಿಸಲ್ಪಡುವುದಿಲ್ಲ, ನೀವು ನಂಬಿಕೆಯಿಂದ ಮಾರ್ಗದರ್ಶಿಸಲ್ಪಡುತ್ತೀರಿ.PC: pexel


ಯಾವುದೋ ದೊಡ್ಡ ಕೊಡುಗೆಯ ಸೂಚನೆ

ನೀವು ವಿಫಲವಾಗುವುದನ್ನು ನೋಡಲು ಕೃಷ್ಣ ನಿಮ್ಮನ್ನು ಪರೀಕ್ಷಿಸುವುದಿಲ್ಲ. ನಿಮ್ಮ ಗುಪ್ತ ಶಕ್ತಿಯನ್ನು ನಿಮಗೆ ತೋರಿಸಲು ಅವನು ಪರೀಕ್ಷಿಸುತ್ತಾನೆ. ಹೋರಾಟವನ್ನು ಎದುರಿಸಿದ ನಂತರ ಯೋಧನು ನಿರ್ಭೀತನಾಗುತ್ತಾನೆ. ವಿಳಂಬವನ್ನು ಸಹಿಸಿಕೊಂಡ ನಂತರ ಭಕ್ತನು ಅಚಲನಾಗುತ್ತಾನೆ. ಜೀವನವು ನಿಧಾನ, ಅನಿಶ್ಚಿತ ಅಥವಾ ಮೌನವಾಗಿದ್ದರೆ ಭರವಸೆಯನ್ನು ಕಳೆದುಕೊಳ್ಳಬೇಡಿ. ಕೃಷ್ಣನ ಸಮಯ ಪವಿತ್ರ. ಅವನ ಯೋಜನೆಗಳು ನಿಖರವಾಗಿರುತ್ತವೆ. ತಾಳ್ಮೆ ಎಂಬುದು ಖಾಲಿ ಕಾಯುವಿಕೆಯಲ್ಲ. ಅದು ಸಕ್ರಿಯ ನಂಬಿಕೆ. ಮತ್ತು ಕೆಲವೊಮ್ಮೆ, ಕೃಷ್ಣನು ನಿಮ್ಮನ್ನು ಕಾಯುವಂತೆ ಮಾಡಿದಾಗ ಅವನು ನೀವು ಊಹಿಸಿದ್ದಕ್ಕಿಂತ ದೊಡ್ಡ ಕೊಡುಗೆಯನ್ನು ಸಿದ್ದಗೊಳಿಸುತ್ತಿದ್ದಾನೆ ಎಂಬುದಾಗಿದೆ.

PC: pexel


ಯೋಜನೆಗಳು ನಿಧಾನವಾಗುವುದು

ನಾವು ಕೈಗೆತ್ತಿಕೊಂಡ ಯಾವುದೇ ಯೋಜನೆಯಾಗಿರಬಹುದು ಅಥವಾ ಕೆಲಸವಾಗಿರಬಹುದು ಅದು ಪೂರ್ಣಗೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದ್ದರೆ, ವಿಳಂಬವಾಗುತ್ತಿದ್ದರೆ ಅದು ನಮಗೆ ನಿರಾಸೆಯನ್ನುಂಟು ಮಾಡುತ್ತದೆ. ಅದರ ಬಗ್ಗೆ ಹೆಚ್ಚು ಯೋಚಿಸುವಂತೆ ಮಾಡುತ್ತದೆ. ಆದರೆ ದೈವಿಕ ಸಮಯವು ಮಾನವ ಸಮಯಕ್ಕಿಂತ ಭಿನ್ನವಾಗಿದೆ ಎಂಬುದನ್ನು ಶ್ರೀಕೃಷ್ಣ ನಿಮಗೆ ಕಲಿಸುತ್ತಿದ್ದಾನೆ ಎಂಬುದಾಗಿದೆ. ನಿಮ್ಮ ಪ್ರಯತ್ನಗಳು ಪ್ರಾಮಾಣಿಕವಾಗಿದ್ದರೂ ಫಲಿತಾಂಶಗಳು ನಿಧಾನವಾಗಿದ್ದರೆ, ಇದರರ್ಥ ನೀವು ಅಪೇಕ್ಷಿಸಿದ್ದಕ್ಕಿಂತಲೂ ಹೆಚ್ಚಿನದೇನೋ ನಿಮಗೆ ಅವನು ನೀಡಲು ಬಯಸುತ್ತಿದ್ದಾನೆ ಎಂದರ್ಥ. ತಾಳ್ಮೆ ಶಿಕ್ಷೆಯಲ್ಲ. ಅದು ಸಿದ್ಧತೆ.

PC: pexel


Dailyhunt
Disclaimer: This content has not been generated, created or edited by Dailyhunt. Publisher: Vijay Karnataka