Dailyhunt
ವೃತ್ತಿ ಭವಿಷ್ಯ 9 ಏಪ್ರಿಲ್ 2026: ವೃಷಭ ಧನು ರಾಶಿಯವರಿಗೆ ಭಾಗ್ಯದ ಬಾಗಿಲು ಓಪನ್- 12 ರಾಶಿಗಳಲ್ಲಿ ಯಾರಿಗೆ ಧನಲಾಭ...?

ವೃತ್ತಿ ಭವಿಷ್ಯ 9 ಏಪ್ರಿಲ್ 2026: ವೃಷಭ ಧನು ರಾಶಿಯವರಿಗೆ ಭಾಗ್ಯದ ಬಾಗಿಲು ಓಪನ್- 12 ರಾಶಿಗಳಲ್ಲಿ ಯಾರಿಗೆ ಧನಲಾಭ...?

Vijay Karnataka 1 week ago

Career horoscope 9 april: ಏಪ್ರಿಲ್ 9 ಗುರುವಾರ ಜಡತ್ವ ಯೋಗ ರೂಪಗೊಳ್ಳುವುದು. ಮೇಷದಿಂದ ಮೀನ ರಾಶಿಯವರೆಗೆ 12 ರಾಶಿಗಳ ಹಣಕಾಸು, ಉದ್ಯೋಗ, ವಿದೇಶ ಪ್ರಯಾಣದ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಏಪ್ರಿಲ್ 9 ಗುರುವಾರ ವಿಷ್ಣು ದೇವನಿಗೆ ಅರ್ಪಿತವಾಗಿದ್ದು ಜ್ಯೋತಿಷ್ಯದಲ್ಲೂ ವಿಶೇಷವಾಗಿದೆ.
ಈ ದಿನ ಕುಂಭ ರಾಶಿಯಲ್ಲಿ ರಾಹು ಹಾಗೂ ಬುಧ ಸಂಯೋಗದಿಂದ ಜಡತ್ವ ಯೋಗ ರೂಪಗೊಳ್ಳಲಿದೆ. ಸಾಮಾನ್ಯವಾಗಿ ಜ್ಯೋತಿಷ್ಯದಲ್ಲಿ ಈ ಯೋಗವನ್ನು ಅಶುಭ ಯೋಗ ಎಂದು ಪರಿಗಣಿಸಲಾಗುತ್ತದೆ. ಆದರೂ ಈ ಯೋಗ ಹಠಾತ್ ಬದಲಾವಣೆಗಳನ್ನು ತರುವ ಶಕ್ತಿಯನ್ನು ಹೊಂದಿದೆ. ಯಾವ ರಾಶಿಯಲ್ಲಿ ಈ ಯೋಗ ಶುಭ ಸ್ಥಾನದಲ್ಲಿ ರೂಪಗೊಳ್ಳುವುದೋ ಅಂತಹ ರಾಶಿಯವರ ಆಲೋಚನೆಗಳು ಬದಲಾಗುತ್ತವೆ. ಸಂವಹನ ಕೌಶಲ್ಯ ವೃದ್ಧಿಯಾಗುವುದು. ಮಾರ್ಕೆಟಿಂಗ್, ಸಂಶೋಧನೆ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಸೃಜನಶೀಲತೆ ಹೆಚ್ಚಾಗಬಹುದು. ಹಾಗಾದರೆ ಈ ಯೋಗ ಏಪ್ರಿಲ್ 9ರಂದು ಮೇಷ ರಾಶಿಯಿಂದ ಮೀನ ರಾಶಿಯವರೆಗೆ 12 ರಾಶಿಯವರಿಗೆ ಯಾವ ರೀತಿ ಬದಲಾವಣೆಯನ್ನು ತರುವುದು ಎಂದು ಇದೀಗ ತಿಳಿಯೋಣ. ಮೇಷ ರಾಶಿ

ಮೇಷ ರಾಶಿಯ 11ನೇ ಮನೆಯಲ್ಲಿ ಜಡತ್ವ ಯೋಗ ರೂಪಗೊಳ್ಳುವುದು. ಈ ಯೋಗ ಮೇಷ ರಾಶಿಯವರಿಗೆ ಕಡಿಮೆ ಹಾನಿಕಾರಕವಾಗಿದೆ. ಮಾಡುವ ಕೆಲಸದಲ್ಲಿ ಬದಲಾವಣೆಗಳಾಗಬಹುದು. ನಿಮ್ಮ ಮಾತುಗಾರಿಕೆ, ಸಂವಹನ ಶೈಲಿ ಮೃದುವಾಗಬಹುದು. ಇದರಿಂದ ನಿಮ್ಮೆಲ್ಲಾ ಕಾರ್ಯಗಳು ಸುಲಭವಾಗಿ ಪೂರ್ಣಗೊಳ್ಳುವುದು. ಇದು ಲಾಭದ ಹಾದಿಯನ್ನು ಸುಲಭವಾಗಿಸುತ್ತದೆ. ಇಂದು ಗುರು ರಾಯರನ್ನು ನೆನೆಯುವುದು ಮಂಗಳಕರ.


ವೃಷಭ ರಾಶಿ

ವೃಷಭ ರಾಶಿಯ 10ನೇ ಮನೆಯಲ್ಲಿ ರಾಹು ಹಾಗೂ ಬುಧ ಸಂಯೋಗ ಸವಾಲುಗಳನ್ನು ಹೆಚ್ಚಿಸುವುದಿಲ್ಲ. ಜಡತ್ವ ಯೋಗದಿಂದಾಗಿ ನಿಮ್ಮ ಕೆಲಸದಲ್ಲಿ ಕೊಂಚ ಶ್ರಮ ಹೆಚ್ಚಾಗಬಹುದು. ಆದರೆ ಶ್ರಮದಿಂದ ಲಾಭ ಸಿಗುವುದು ಖಚಿತ ಎನ್ನುವುದನ್ನು ಮರೆಯಬೇಡಿ. ನಷ್ಟಕ್ಕೆ ಅವಕಾಶಗಳು ಇರುವುದಿಲ್ಲ. ಬುಧ ನಿಮ್ಮೆಲ್ಲಾ ಕಾರ್ಯಗಳಲ್ಲಿ ಯಶಸ್ಸನ್ನು ತರಲಿದ್ದಾನೆ. ಕುಟುಂಬದ ಸಹಕಾರವನ್ನು ನೀವು ಪಡೆಯಬಹುದು.


ಮಿಥುನ ರಾಶಿ

ಮಿಥುನ ರಾಶಿಯ 9ನೇ ಮನೆಯಲ್ಲಿ ಜಡತ್ವ ಯೋಗ ಸೃಷ್ಟಿ ಮಿಶ್ರ ಫಲಗಳನ್ನು ನೀಡುವುದು. ಈ ಯೋಗದಿಂದ ನಿಮ್ಮ ಕಾರ್ಯಗಳಲ್ಲಿ ಅಡೆತಡೆಗಳು ಹೆಚ್ಚಾಗಬಹುದು. ಆದರೆ ಬುಧನ ಅನುಕೂಲಕರ ಸ್ಥಾನದಿಂದ ಎಲ್ಲಾ ಸವಾಲುಗಳನ್ನು ಎದುರಿಸುವ ಶಕ್ತಿ ನಿಮಗೆ ಇರಲಿದೆ. ಹೊಸ ಯೋಜನೆಗಳಿಗೆ ಸ್ವಂತ ಹುದ್ದೆ ಶುರು ಮಾಡಬಹುದು. ಆದರೆ ಅನುಭವಿಗಳ ಸಹಕಾರ ಮುಖ್ಯ. ಇಂದು ವಿಷ್ಣು ಸಹಸ್ರನಾಮವನ್ನು ಜಪಿಸುವುದು ಶುಭ.


ಕಟಕ ರಾಶಿ

ಕಟಕ ರಾಶಿಯ 8ನೇ ಮನೆಯಲ್ಲಿ ರಾಹು ಬುಧ ಸಂಯೋಗ ಮಂಗಳಕರವಲ್ಲ. ಈ ಸಮಯದಲ್ಲಿ ನೀವು ಮಾಡುವ ಕಾರ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಕೆಲಸದಲ್ಲಿ ನಿರ್ಲಕ್ಷ್ಯ ತೋರುವುದರಿಂದ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಕೆಲಸದಲ್ಲಿ ನೆಮ್ಮದಿ ತರುವುದು ಕಷ್ಟವಾಗಬಹುದು. ರಾಹುವಿನ ಅಶುಭ ಸ್ಥಾನದಿಂದ ಪ್ರತಿಸ್ಪರ್ಧಿಗಳ ಕಾಟ, ಅಪನಂಬಿಕೆ, ಆರೋಪಗಳು ನಿಮ್ಮ ಮೇಲೆ ಬರುವ ಲಕ್ಷಣಗಳು ಇವೆ ಜಾಗ್ರತೆ.


ಸಿಂಹ ರಾಶಿ

ಸಿಂಹ ರಾಶಿಯ ಏಳನೇ ಮನೆಯಲ್ಲಿ ರಾಹು ಬುಧ ಸಂಯೋಗವಾಗಿದೆ. ಈ ಎರಡು ಗ್ರಹಗಳು ಸಿಂಹ ರಾಶಿಯವರಿಗೆ ಮಿಶ್ರ ದಿನವನ್ನು ತರುವುದು. ಈ ದಿನ ಮಾಡುವ ಕಾರ್ಯಗಳು ಸಾಮಾನ್ಯವಾಗಿರುತ್ತವೆ. ಇಂದು ಮಾಡುವ ಕೆಲಸಗಳು ಯಾವುದೇ ಅಡೆತಡೆ ಇಲ್ಲದೆ ಪೂರ್ಣಗೊಳ್ಳುವುದು. ನಿರೀಕ್ಷೆಯಂತೆ ಲಾಭ ಸಿಗುವ ಸಾಧ್ಯತೆಗಳು ಇವೆ. ಹಿಂದೆ ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳುವಿರಿ.


ಕನ್ಯಾ ರಾಶಿ

ಏಪ್ರಿಲ್ 9 ಕನ್ಯಾ ರಾಶಿಯವರಿಗೆ ಹೆಚ್ಚು ತೊಂದರೆಗಳನ್ನು ತರುವುದು. ಇದು ನಿಮ್ಮ ಕಾರ್ಯಗಳಲ್ಲಿ ಅಡೆತಡೆಗಳನ್ನು ತರಬಹುದು. ಹೀಗಾಗಿ ಮಾಡುವ ಕಾರ್ಯಗಳಲ್ಲಿ ಶ್ರದ್ಧೆ ಇರಲಿ. ಮೋಸ ಹೋಗುವ ಸಾಧ್ಯತೆಗಳು ಇರುವುದರಿಂದ ಜಾಗರೂಕರಾಗಿರುವುದು ಉತ್ತಮ. ಈ ದಿನ ಯಾರನ್ನೂ ಕುರುಡಾಗಿ ನಂಬುವುದು ತರವಲ್ಲ. ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರುವುದು ಉತ್ತಮ.


ತುಲಾ ರಾಶಿ

ತುಲಾ ರಾಶಿಯ 5ನೇ ಮನೆಯಲ್ಲಿ ಜಡತ್ವ ಯೋಗ ರೂಪಗೊಳ್ಳುವುದು. ಈ ಯೋಗ ಮಿಶ್ರ ಫಲಗಳನ್ನು ನೀಡುವುದು. ಈ ದಿನ ಲಾಭವನ್ನು ನೀವು ನಿರೀಕ್ಷೆ ಮಾಡಬಹುದು. ಸ್ವಂತ ಹುದ್ದೆ ಶುರು ಮಾಡುವ ಮುನ್ನ ನೂರು ಬಾರಿ ಯೋಚಿಸಿ. ಅನುಭವಸ್ಥರಿಂದ ಮಾಹಿತಿ ಪಡೆಯುವುದು ನಿಮ್ಮ ಕಾರ್ಯಗಳನ್ನು ಸುಲಭಗೊಳಿಸುತ್ತದೆ. ಹಿಂದೆ ಮಾಡಿದ ಕೆಲಸಗಳಿಂದ ಧನಲಾಭವಾಗುವ ಸಾಧ್ಯತೆ ಇದೆ.


ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ 4ನೇ ಮನೆಯಲ್ಲಿ ಜಡತ್ವ ಯೋಗ ರೂಪಗೊಳ್ಳುವುದು. ಈ ಸ್ಥಾನದಲ್ಲಿ ಬುಧ ಸಂಚಾರ ಕೆಲಸದಲ್ಲಿ ಲಾಭವನ್ನು ತರಲಿದೆ. ರಾಹುವಿನಿಂದ ಕೊಂಚ ತೊಂದರೆಗಳು ಎದುರಾಗಬಹುದು. ಆದರೆ ಈ ಸಮಯದಲ್ಲಿ ಸಾಲವಾಗಿ ಹಣವನ್ನು ನೀಡುವುದು ಪಡೆಯುವುದು ತರವಲ್ಲ. ನಿಮ್ಮ ವಿರುದ್ಧ ಕುತಂತ್ರಗಳು ನಡೆಯಬಹುದು. ಇದರಿಂದ ನೆಮ್ಮದಿ ಹಾಳಾಗುವ ಸಾಧ್ಯತೆಗಳು ಇವೆ.


ಧನು ರಾಶಿ

ಧನು ರಾಶಿಯ 3ನೇ ಮನೆಯಲ್ಲಿ ರಾಹು ಹಾಗೂ ಬುಧ ಗ್ರಹಗಳು ಸಂಯೋಗವಾಗಲಿದೆ. ಈ ಸಂಯೋಗ ಅನಿರೀಕ್ಷಿತ ಫಲಗಳನ್ನು ತರಬಹುದು. ನಿಮ್ಮ ಆರ್ಥಿಕ ಸ್ಥಿತಿ ಸ್ಥಿರವಾಗಿ ಇರಲಿದೆ. ಹಿಂದೆ ಮಾಡಿದ ಶ್ರಮದ ಫಲವನ್ನು ನೀವು ಪಡೆಯುವಿರಿ. ಮನೆಯಲ್ಲಿ ಹಾಗೂ ಉದ್ಯೋಗ ಸ್ಥಳದಲ್ಲಿ ನೆಮ್ಮದಿಯ ವಾತಾವರಣವನ್ನು ನೀವು ಕಾಣುವಿರಿ. ಅಂದುಕೊಂಡ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲಿವೆ.


ಮಕರ ರಾಶಿ

ಮಕರ ರಾಶಿಯ 2ನೇ ಮನೆಯಲ್ಲಿ ರಾಹು ಹಾಗೂ ಬುಧ ಸಂಯೋಗದಿಂದ ಜಡತ್ವ ಯೋಗ ರೂಪಗೊಳ್ಳುವುದು. ನಿಮ್ಮೆಲ್ಲಾ ಆಸೆಗಳು ಈಡೇರುವ ಸಮಯ ಇದು. ಆರ್ಥಿಕ ಜೀವನ ನೆಮ್ಮದಿಯಿಂದ ಕೂಡಿರಲು ನಿಮ್ಮ ಶ್ರಮದ ಅಗತ್ಯವಿದೆ. ದೊಡ್ಡ ಮಟ್ಟದ ಬದಲಾವಣೆಗಳನ್ನು ಈ ದಿನ ನೀವು ನಿರೀಕ್ಷೆ ಮಾಡಬಹುದು. ಆದರೆ ಸಣ್ಣ ಪ್ರಯತ್ನ ದೊಡ್ಡ ಲಾಭವನ್ನು ತಮದುಕೊಡುವ ಸಾಧ್ಯತೆ ಇದೆ.


Dailyhunt
Disclaimer: This content has not been generated, created or edited by Dailyhunt. Publisher: Vijay Karnataka