ಉತ್ಸವದ ಪ್ರಮುಖ ಆಕರ್ಷಣೆಯಾಗಿ ವಿದ್ಯುತ್ ಚಾಲಿತ ಕೃತಕ ಆನೆ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿ ಎಲ್ಲರ ಗಮನ ಸೆಳೆಯಿತು. ಅಮ್ಮಿನಬಾವಿ ಅಯ್ಯಪ್ಪಸ್ವಾಮಿ ದೇವಸ್ಥಾನದ ಶ್ರೀ ನಾರಾಯಣಗುರು ಸ್ವಾಮೀಜಿ ಹಾಗೂ ಶ್ರೀ ಸಿದ್ಧಾರೂಢಮಠದ ನಾಗೇಂದ್ರ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು.ಮಾಜಿ ಸೈನಿಕರಾದ ರಾಮಣ್ಣ ಕೋಳಿ, ಲಕ್ಷಣ ಜುನ್ನಾಯ್ಕರ, ಅರ್ಜುನ ನೀರಲಕಟ್ಟಿ, ವಜಿಹಾದೇವ ಪತ್ತಾರ, ಶಂಕರ ಚಿಕ್ಕನರಗುಂದ, ವಿವಿಧ ಸಮಾಜಗಳ ಗಣ್ಯರಾದ ಚೆನ್ನಯ್ಯ ಹಿರೇಮಠ, ದೇವಾಲಯದ ಪ್ರಧಾನ ಅರ್ಚಕ ಶ್ರೀಕಾಂತ ಪದಕಿ, ಮಲ್ಲಪ್ಪ ಕುಸುಗಲ್ಲ, ಶಿವಾಜಿ ಕಲಾಲ, ವಸಂತ ಪದಕಿ, ರಾಮು ದೇಶಪಾಂಡೆ ಹಾಗೂ ಗ್ರಾಮದ ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಇನ್ನಷ್ಟು ಓದಿ