ಬೀದರ್: ನೆರೆಯ ತೆಲಂಗಾಣದ ಜಹೀರಾಬಾದ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತ ಏಳು ಜನ ಕೂಲಿ ಕಾರ್ಮಿಕರು ಸಾವಿಗೀಡಾದ ಘಟನೆ ನಡೆದಿದೆ.ಬೀದರ ತಾಲೂಕಿನ ರಾಜಗೀರಾ ಗ್ರಾಮದ ಏಳು ಕಾರ್ಮಿಕರು ಮೃತಪಟ್ಟಿದ್ದಾರೆ. ಚಾಲಕ ದೇವದಾಸ ಮಾರುತಿ, ರೇಖಾ ಸಂಜು, ರೇಷ್ಮಾ, ನಿಕಿತಾ, ಶ್ರೀದೇವಿ, ಕವಿತಾ ಗುಂಡಪ್ಪ, ತುಳಮ್ಮ ಮೃತಪಟ್ಟವರು.

