ಬೀದಿಬದಿ ವ್ಯಾಪಾರಿಗಳನ್ನು ಸ್ಥಳಾಂತರಿಸಿ
ಮಾನ್ವಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಮುಖ್ಯ ರಸ್ತೆಯ ಎರಡು ಕಡೆ ಬೀದಿಬದಿ ವ್ಯಾಪಾರಿಗಳನ್ನು ಈ ಕೂಡಲೇ ಸ್ಥಳಾಂತರಿಸುವಂತೆ ಒತ್ತಾಯಿಸಿ ರಾಯಚೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬಿಜೆಪಿ ಮಂಡಲ ಸದಸ್ಯರಿಂದ ಮಂಗಳವಾರ ಜಿಲ್ಲಾಧಿಕಾರಿ ಕೆ.ನಿತೀಶ್ಗೆ ಮನವಿ ಸಲ್ಲಿಸಲಾಯಿತು.ಮಾಜಿ ಶಾಸಕ ಗಂಗಾಧರ ನಾಯಕ ಮಾತನಾಡಿ, ಮುಖ್ಯ ರಸ್ತೆಯಲ್ಲಿ ಬೀದಿಬದಿ ವ್ಯಾಪಾರ ಮಾಡಿವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತದೆ. ವ್ಯಾಪಾರಸ್ಥರಿಗೆ ಬೇರೆ ಸ್ಥಳ ನಿಗದಿ ಮಾಡಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಬೇಕು.
ಪಟ್ಟಣಕ್ಕೆ ನೀರು ಪೂರೈಸುವ ಪಂಪಾ ಉದ್ಯಾನವನದಲ್ಲಿರುವ 63 ಕೆವಿಎ ಜನರೇಟರ್ನ್ನು ದುರಸ್ಥಿಗೊಳಿಸಬೇಕು. ನೀರಿನ ಟ್ಯಾಂಕ್ ತುಂಬಿಸುವ ವೇಳೆ ನೀರು ಪೋಲಾಗದಂತೆ ಕ್ರಮ ವಹಿಸಬೇಕು.
ಪಟ್ಟಣಕ್ಕೆ ನೀರು ಪೂರೈಸುವ ಪಂಪಾ ಉದ್ಯಾನವನದಲ್ಲಿರುವ 63 ಕೆವಿಎ ಜನರೇಟರ್ನ್ನು ದುರಸ್ಥಿಗೊಳಿಸಬೇಕು. ನೀರಿನ ಟ್ಯಾಂಕ್ ತುಂಬಿಸುವ ವೇಳೆ ನೀರು ಪೋಲಾಗದಂತೆ ಕ್ರಮ ವಹಿಸಬೇಕು.
ವಿವಿಧ ವಾರ್ಡ್ಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ನಿಗದಿತ ಸಮಯದಲ್ಲಿ ನೀರು ಪೂರೈಸಬೇಕು. ಚರಂಡಿ ಸ್ವಚ್ಚಗೊಳಿಸಬೇಕು. ಅನಧಿಕೃತ ಶುದ್ಧ ಕುಡಿವ ನೀರಿನ ಘಟಕಗಳ ವಿರುದ್ಧ ಕ್ರಮಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ದೊರಬಾಬು, ಜಿಲ್ಲಾ ಉಪಾಧ್ಯಕ್ಷ ಶರಣಪ್ಪಗೌಡ ನಕ್ಕುಂದಿ, ಟಿಪಿಸಿಎಂಎಸ್ ಅಧ್ಯಕ್ಷ ತಿಮ್ಮಾರೆಡ್ಡಿ ಭೋಗಾವತಿ, ಪ್ರಮುಖರಾದ ಜೆ.ಸುಧಾಕರ್, ವಿಶ್ವನಾಥ್ ನಂದ್ಯಾಳ, ಶ್ರೀನಿವಾಸ್, ರವಿಕುಮಾರ್ ಸಾಹುಕಾರ, ಜಿ.ಉಮಾಪತಿ ನಾಯಕ, ಶಿವಕುಮಾರ್, ಶರಣಯ್ಯ ಸ್ವಾಮಿ, ಜಗದೀಶ್ ಒತ್ತೂರು, ಚನ್ನಬಸವ ಜಾನೆಕಲ್ ಇತರರಿದ್ದರು.
ಇನ್ನಷ್ಟು ಓದಿ

