ಹೂವಿನಹಡಗಲಿ: ತಾಲೂಕಿನ ಬೂದನೂರು ಗ್ರಾಮದ ಜನತಾ ಪ್ಲಾಟ್ ನಿವಾಸಿಗಳು ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಮಂಗಳವಾರ ತಹಸಿಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ಸರ್ಕಾರ 1974-75ರಲ್ಲಿ ಜನತಾ ಪ್ಲಾಟ್ಗಾಗಿ 1.50 ಎಕರೆ ಜಮೀನು ಖರೀದಿಸಿ ಗ್ರಾಮದಲ್ಲಿ ನಿವೇಶನ ಹಾಗೂ ವಸತಿ ರಹಿತ 44 ಬಡ ಫಲಾನುಭವಿಗಳಿಗೆ ಹಂಚಿಕೆ ಮಾಡಿದೆ.
ಗ್ರಾಮದಲ್ಲಿ ಸರ್ಕಾರ 1974-75ರಲ್ಲಿ ಜನತಾ ಪ್ಲಾಟ್ಗಾಗಿ 1.50 ಎಕರೆ ಜಮೀನು ಖರೀದಿಸಿ ಗ್ರಾಮದಲ್ಲಿ ನಿವೇಶನ ಹಾಗೂ ವಸತಿ ರಹಿತ 44 ಬಡ ಫಲಾನುಭವಿಗಳಿಗೆ ಹಂಚಿಕೆ ಮಾಡಿದೆ.
ಇದರಿಂದ ಇ-ಸ್ವತ್ತು, ಸಾಲ, ಸೌಲಭ್ಯ ಸಿಗುತ್ತಿಲ್ಲ. ಈ ಜಾಗದಲ್ಲಿ ಕಟ್ಟಿರುವ ಮನೆಗಳು ಬೀಳುವ ಸ್ಥಿತಿಯಲ್ಲಿದ್ದು ಗೃಹಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ. ತಕ್ಷಣ ಹಕ್ಕುಪತ್ರ ನೀಡಬೇಕು ಎಂದು ಫಲಾನುಭವಿಗಳು ಆಗ್ರಹಿಸಿದರು.

