ಬಂಧಿತ ಆರೋಪಿಬಂಧಿತ ಆರೋಪಿ ಇಬ್ಬರು ಬ್ಯಾಟರಿ ಕಳ್ಳರ ಬಂಧನ
ನಿಪ್ಪಾಣಿ:
ವಾಹನ ಬಳಸುವ ಬ್ಯಾಟರಿ ಕಳ್ಳತನ ಪ್ರಕರಣಕ್ಕೆಇಲ್ಲಿನ
ಆಂದೋಲನ ನಗರದ ನಿವಾಸಿ ಅಮಿತ ಅಶೋಕ ರಾವಳ(೧೯), ಸಚಿನ ಶಂಕರ ಸಾಲುಂಕೆ(೨೧)ರನ್ನು ಬಸವೇಶ್ವರ ಚೌಕ ಠಾಣೆಯ ಪೊಲೀಸರು ಸೋಮವಾರ ಬಂದಿಸಿ,ಆರೋಪಿತರಿಂದ ಕಳ್ಳತನ ಮಾಡಿದ್ದ ಬ್ಯಾಟರಿ ಹಾಗೂ ಕಳ್ಳತನಕ್ಕೆ ಬಳಸಿದ್ದ ಎರಡು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು ಕಳೆದ ಮೂರು ತಿಂಗಳ ವಿವಿಧ ಕಂಪನಿಗಳಲ್ಲಿ ಒಟ್ಟು 22 ಬ್ಯಾಟರಿಗಳನ್ನು ಕಳ್ಳತನ ಮಾಡಿ, ಮಾರಾಟ ಮಾಡಲು ಸಂಗ್ರಹಿಸಿದ್ದರು, ಪೊಲೀಸರು ರಾತ್ರಿ ಗಸ್ತು ತಿರುಗಿದಾಗ ಸಂಶಯಾಸ್ಪದವಾಗಿ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಎಂದು ಪೊಲೀಸ್ರು ತಿಳಿಸಿದ್ದಾರೆ.

