Dailyhunt Logo
  • Light mode
    Follow system
    Dark mode
    • Play Story
    • App Story
ಮಹಾರಾಜ ಟ್ರೋಫಿ: ಫೈನಲ್​ಗೇರಿದ ಬೆಂಗಳೂರು ಬ್ಲಾಸ್ಟರ್ಸ್​; ಇಂದು ಶಿವಮೊಗ್ಗ-ಮಂಗಳೂರು 'ಸೆಮಿಫೈನಲ್​'

ಮಹಾರಾಜ ಟ್ರೋಫಿ: ಫೈನಲ್​ಗೇರಿದ ಬೆಂಗಳೂರು ಬ್ಲಾಸ್ಟರ್ಸ್​; ಇಂದು ಶಿವಮೊಗ್ಗ-ಮಂಗಳೂರು 'ಸೆಮಿಫೈನಲ್​'

ವಿಜಯವಾಣಿ ಸುದ್ದಿಜಾಲ ಬೆಂಗಳೂರುನಾಯಕ ಶುಭಾಂಗ್​ ಹೆಗ್ಡೆ (65*) ಮತ್ತು ಪ್ರವಿಣ್​ ದುಬೆ (69*) ಅರ್ಧಶತಕದಾಟದ ಬಲದಿಂದ ಬೆಂಗಳೂರು ಬ್ಲಾಸ್ಟರ್ಸ್​ ತಂಡ ಮಹಾರಾಜ ಟ್ರೋಫಿ ಕೆಎಸ್​ಸಿಎ ಟಿ20 ಟೂರ್ನಿಯ (Maharaja Trophy KSCA T20) ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಕೋಸ್ಟಲ್​ ಕಿಂಗ್ಸ್​ ಮಂಗಳೂರು ವಿರುದ್ಧ 12 ರನ್​ಗಳಿಂದ ಗೆಲುವು ಸಾಧಿಸಿದೆ.
ಇದರೊಂದಿಗೆ ಬೆಂಗಳೂರು ಮೊದಲ ತಂಡವಾಗಿ ಫೈನಲ್​ ಪ್ರವೇಶಿಸಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಬೆಂಗಳೂರು 5 ವಿಕೆಟ್​ಗೆ 185 ರನ್​ ಗಳಿಸಿತು. ಬೆಂಗಳೂರು ಒಂದು ಹಂತದಲ್ಲಿ 52 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಪ್ರತಿಯಾಗಿ ನಿಕಿನ್​ ಜೋಸ್​ (45), ಸೂರಜ್​ ಅಹುಜಾ (52*) ಪ್ರತಿರೋಧದ ನಡುವೆಯೂ ಮಂಗಳೂರು 6 ವಿಕೆಟ್​ಗೆ 173 ರನ್​ ಗಳಿಸಲಷ್ಟೇ ಶಕ್ತಗೊಂಡಿತು.
2ನೇ ಕ್ವಾಲಿಫೈಯರ್​ಗೆ ಶಿವಮೊಗ್ಗ ಯೋಧಾಸ್​ ಎಂಟ್ರಿ: ಸರ್ವಾಂಗೀಣ ನಿರ್ವಹಣೆ ತೋರಿದ ಶಿವಮೊಗ್ಗ ಯೋಧಾಸ್​ ತಂಡ ಮಹಾರಾಜ ಟ್ರೋಫಿ ಕೆಎಸ್​ಸಿಎ ಟಿ20 ಟೂರ್ನಿಯ ಎಲಿಮಿನೇಟರ್​ನಲ್ಲಿ ಮೈಸೂರು ವಾರಿಯರ್ಸ್​ ತಂಡವನ್ನು 7 ವಿಕೆಟ್​ಗಳಿಂದ ಮಣಿಸಿ, 2ನೇ ಕ್ವಾಲಿಫೈಯರ್​ ಪಂದ್ಯಕ್ಕೆ ಅರ್ಹತೆ ಪಡೆಯಿತು. ಲವನೀತ್​ ಸಿಸೋಡಿಯಾ ಹಂಗಾಮಿ ಸಾರಥ್ಯದ ಶಿವಮೊಗ್ಗ ಯೋಧಾಸ್​ ಸೆಮಿಫೈನಲ್​ ಮಾದರಿಯ ಕ್ವಾಲಿಫೈಯರ್​ನಲ್ಲಿ ಕೋಸ್ಟಲ್​ ಕಿಂಗ್ಸ್​ ಮಂಗಳೂರು ತಂಡವನ್ನು ಶನಿವಾರ ಎದುರಿಸಲಿದೆ.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಶಿವಮೊಗ್ಗ ಯೋಧಾಸ್​ ಬೌಲಿಂಗ್​ ಆಯ್ಕೆ ಮಾಡಿಕೊಂಡಿತು. ಎಡಗೈ ವೇಗಿ ಅಭಿಲಾಷ್​ ಶೆಟ್ಟಿ (14ಕ್ಕೆ 3) ದಾಳಿಗೆ ನಲುಗಿದ ಮೈಸೂರಿನ ಅಗ್ರ ಕ್ರಮಾಂಕ ವೈಫಲ್ಯ ಕಂಡಿತು. ಅಭಿಷೇಕ್​ ಪ್ರಭಾಕರ್​ (36* ರನ್​, 10 ಎಸೆತ, 1 ಬೌಂಡರಿ, 5 ಸಿಕ್ಸರ್​) ಆಸರೆಯಲ್ಲಿ ಮೈಸೂರು 9 ವಿಕೆಟ್​ಗೆ 161 ರನ್​ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಪ್ರತಿಯಾಗಿ ಆರಂಭಿಕರಾದ ಲವನೀತ್​ ಸಿಸೋಡಿಯ (56 ರನ್​, 32 ಎಸೆತ, 7 ಬೌಂಡರಿ, 2 ಸಿಕ್ಸರ್​) ಹಾಗೂ ತುಷಾರ್​ ಸಿಂಗ್​ (53 ರನ್​, 39 ಎಸೆತ, 2 ಬೌಂಡರಿ, 3 ಸಿಕ್ಸರ್​) ಭರ್ಜರಿ ಜತೆಯಾಟದ ನೆರವಿನಿಂದ ಶಿವಮೊಗ್ಗ 16.1 ಓವರ್​ಗಳಲ್ಲಿ 3 ವಿಕೆಟ್​ಗೆ 162 ರನ್​ಗಳಿಸಿ ಗೆದ್ದು ಬೀಗಿತು.

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani