ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿಪ್ರಸಕ್ತ ಸಾಲಿನ ಜನವರಿಯಿಂದಇಲ್ಲಿಯವರೆಗೆ 26 ದಡಾರ
ಪ್ರಕರಣಗಳು, 1 ರುಬೆಲ್ಲಪ್ರಕರಣಪತ್ತೆಯಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತವು, ಕಾಯಿಲೆ ನಿಮೂರ್ಲನೆಗೆ ಲಸಿಕಾಕರಣವನ್ನು ಮತ್ತಷ್ಟು ಚುರುಕುಗೊಳಿಸಲು ಮುಂದಾಗಿದೆ.
ಜನವರಿಯಿಂದಇಲ್ಲಿಯವರೆಗೆದಡಾರಮತ್ತುರುಬೆಲ್ಲಾಸಂಶಯಾಸ್ಪದ 205 ಪ್ರಕರಣಗಳಲ್ಲಿಮಾದರಿರಕ್ತಪರೀಕ್ಷೆನಡೆಸಲಾಗಿದೆ. ಈಪೈಕಿ ೨೬ ಪ್ರಕರಣಗಳಲ್ಲಿ ಕಾಯಿಲೆ ದೃಢಪಟ್ಟಿವೆ. ಮಂಚೇನಹಳ್ಳಿಭಾಗದಲ್ಲಿಯೇ 10 ಪ್ರಕರಣಗಳುಕಂಡುಬಂದಿವೆ. ಶಿಡ್ಲಘಟ್ಟಮತ್ತುಮಂಚೇನಹಳ್ಳಿನಗರಪ್ರದೇಶವ್ಯಾಪ್ತಿಯಲ್ಲಿಲಸಿಕಾಕರಣವುಸಮರ್ಪಕವಾಗಿ ನಡೆಯದಿರುವುದು ಗೊತ್ತಾಗಿದೆ.
ಇಲ್ಲಿನ ಜಿ.ಪಂ.ಕಚೇರಿಯಸಭಾಂಗಣದಲ್ಲಿ ಕೈಗೊಂಡಿದ್ದ ಲಸಿಕಾಕರಣಪ್ರಗತಿಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿಜಿ.ಪ್ರಭುಆರೋಗ್ಯಇಲಾಖೆಯಅಧಿಕಾರಿಗಳಿಗೆ ಈ ಬಗ್ಗೆ ಸಲಹೆ ಸೂಚನೆನೀಡಿದ್ದಾರೆ.
ಪೊಲೀಯೋಲಸಿಕೆ, ಇಂದ್ರಧನುಷ್ಲಸಿಕೆಸೇರಿದಂತೆವಿವಿಧ ಲಸಿಕಾಕರಣದಲ್ಲಿ ಪೂರ್ಣ ಗುರಿ ಸಾಧನೆಯಾಗಬೇಕು. ಮಕ್ಕಳಿಗೆಲಸಿಕೆ ಹಾಕಿದ ಬಳಿಕ ಪರಿಶೀಲಿಸಿ,ದೃಢೀಕರಣಪತ್ರವನ್ನು ನೀಡಬೇಕು. ಆಸ್ಪತ್ರೆಯಿಂದಕಳುಹಿಸುವಾಗ ತಾಯಿಕಾರ್ಡ್ ಹಾಗೂ ಬಿಡುಗಡೆಯ ಪ್ರಮಾಣದಲ್ಲಿ ಲಸಿಕಾಕರಣದ ಮಾಹಿತಿಯನ್ನು ಕಡ್ಡಾಯವಾಗಿನಮೂದಿಸಬೇಕು. ಇದರ ಬಗ್ಗೆ ಆಯಾ ವ್ಯಾಪ್ತಿಯ ತಾಲೂಕು ಆರೋಗ್ಯಾಧಿಕಾರಿಗಳು ದೃಢೀಕರಿಸಬೇಕು. ಇದರ ಬಗೆಗಿನ ಖಾತ್ರಿಯ ವರದಿ ಸಲ್ಲಿಸಬೇಕು ಎಂದರು.
ಇನ್ನಷ್ಟು ಓದಿ

