ಕಾರ್ಗಲ್: ಜೋಗ ಜಲಪಾತದ ಸನಿಹ ಹೊಂಗೆ ಮರದ ಕೊಂಬೆಯೊಂದು ರಸ್ತೆಗೆ ಅಡ್ಡಲಾಗಿ ಬೆಳೆದ ಪರಿಣಾಮ ಸಂಚಾರಕ್ಕೆ ತೊಡಕ್ಕಾಗಿತ್ತು. ಈ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿಯಿಂದ ಮರವನ್ನು ಕತ್ತರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಲಾಯಿತು.ಪ್ರವಾಸಿ ತಾಣದ ಬಳಿ ರಾತ್ರಿ ಹೊತ್ತು ವಾಹನಗಳು ಸಂಚರಿಸುತ್ತವೆ.
ಮಾಹಿತಿ ಇಲ್ಲದ ಪ್ರವಾಸಿ ವಾಹನಗಳು ಮರಕ್ಕೆ ತಗುಲುವ ಅಪಾಯವಿದ್ದ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ಮರವನ್ನು ಕತ್ತರಿಸಲಾಗಿದೆ ಎಂದು ಜೋಗ-ಕಾರ್ಗಲ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಂ.ಕೆ.ಸುರೇಶ್ ತಿಳಿಸಿದರು. ಭಟ್ಕಳ ಮತ್ತು ಸಿದ್ಧಾಪುರ ಮಾರ್ಗದ ಮುಖ್ಯರಸ್ತೆಯಾಗಿದ್ದು, ಬಸ್, ಲಾರಿಯಂತಹ ದೊಡ್ಡ ವಾಹನಗಳು ಸಂಚರಿಸುವ ಸಂದರ್ಭ ಮರಕ್ಕೆ ತಗಲುವ ಸಾಧ್ಯತೆ ಇತ್ತು ಎಂದು ತಿಳಿಸಿದರು. ಅರಣ್ಯ ಇಲಾಖೆಯ ಮಂಜುನಾಥ್ ಹಾಗೂ ಮೆಸ್ಕಾಂ ಸಿಬ್ಬಂದಿ ಇದ್ದರು.
ಇನ್ನಷ್ಟು ಓದಿ
ಇನ್ನಷ್ಟು ಓದಿ

