ಬಾಗಲಕೋಟೆ: ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವ ಬಗ್ಗೆ ಇಷ್ಟು ದಿನ ಯಾವುದೇ ಕ್ರಮ ತೆಗೆದುಕೊಳ್ಳದೇ ಈಗ ಉಪ ಚುನಾವಣೆ ವೇಳೆ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವ ಆಮಿಷವೊಡ್ಡುತ್ತಿದ್ದಾರೆ ಎಂದು ತೇರದಾಳ ಶಾಸಕ, ಪಂಚಮಸಾಲಿ ಸಮಾಜದ ಮುಖಂಡ ಸಿದ್ದು ಸವದಿ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದೀಗ ನೀವು ಯಾರ ಮೀಸಲಾತಿ ಕಿತ್ತುಕೊಂಡು ಪಂಚಮಸಾಲಿಗೆ 2ಎ ಗೆ ಮೀಸಲಾತಿ ಕೊಡುತ್ತೀರಿ? ಎಂದು ಮೊದಲು ಸ್ಪಷ್ಟಪಡಿಸಿ, ಅದನ್ನು ಬಿಟ್ಟು ಸಮಾಜದ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಬೇಡಿ ಎಂದರು.
ನಿಮ್ಮ ಈ ಭರವಸೆ ಬರೀ ಬೊಗಸ್, ಚುನಾವಣೆ ಗಿಮಿಕ್ ಎಂದು ಹೇಳಬಹುದು. ಸಿದ್ದರಾಮಯ್ಯ ಅವರು ಸುಳ್ಳು ಭರವಸೆಗೆ ಸಮಾಜದವರು ಕಿವಿಗೊಡಬಾರದು. 2028ಕ್ಕೆ ಬಿಜೆಪಿ ಸರ್ಕಾರ ಬರುತ್ತದೆ. ನಾವು 2ಸಿ ಮತ್ತು 2ಡಿ ಪ್ರತ್ಯೇಕ ವರ್ಗದ ಅಡಿಯಲ್ಲಿ ಮೀಸಲಾತಿ ನೀಡುತ್ತೇವೆ. ಅವರ ಬೊಗಸ್ ಮಾತಿಗೆ ಮರಳಾಗದೇ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಇನ್ನಷ್ಟು ಓದಿ

