ಸೇಡಂ: ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರಿಗೆ ರಾಜಕೀಯವಾಗಿ ಸಮಾನ ಹಕ್ಕು ಕಲ್ಪಿಸುವ ನಿಟ್ಟಿನಲ್ಲಿ ಜಾರಿಗೊಳಿಸಲು ಹೊರಟಿದ್ದ ಶೇ.33 ಮಹಿಳಾ ಮೀಸಲಾತಿ ಮಸೂದೆಗೆ ಕಾಂಗ್ರೆಸ್ ಮತ್ತು ಅದರ ಬೆಂಬಲಿತ ಪಾರ್ಟಿಗಳ ಕುತಂತ್ರದಿಂದ ಸೋಲಾಗಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯೆ ಸಂತೋಷಿರಾಣಿ ಪಾಟೀಲ್ ತೆಲ್ಕೂರ ದೂರಿದರು.ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಿಂದ ರೈಲ್ವೆ ನಿಲ್ದಾಣದವರೆಗೆ ನಾರಿಶಕ್ತಿ ವಂದನಾ ಅಧಿನಿಯಮ ಜಾರಿಯಾಗದಂತೆ ತಡೆದ ಕಾಂಗ್ರೆಸ್ ಪಕ್ಷದ ಕುತಂತ್ರ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾದಿಂದ ಗುರುವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿ, ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರಿದ್ದಾರೆ.
ನಮಗೂ ರಾಜಕೀಯ ಅವಕಾಶ ಸಿಗಬೇಕು ಎನ್ನುವ ಉದ್ದೇಶದಿಂದ ಮೋದಿ ಸರ್ಕಾರ ಮೀಸಲಾತಿ ಕರಡನ್ನು ಸಂಸತ್ತಿನಲ್ಲಿ ಮಂಡಿಸಿತ್ತು. ಆದರೆ ಹಿಂದಿನಿಂದಲೂ ಮಹಿಳಾ ವಿರೋಧಿಯಾಗಿರುವ ಕಾಂಗ್ರೆಸ್ ಪಕ್ಷ ತನ್ನ ಮಿತ್ರ ಪಕ್ಷಗಳೊಂದಿಗೆ ಸೇರಿಕೊಂಡು ಕುತಂತ್ರ ನಡೆಸುವ ಮೂಲಕ ಮಹಿಳಾ ಪರವಾದ ಬಿಲ್ ಅನ್ನು ಸೋಲಿಸಿದೆ. ಇಂತಹ ಪಕ್ಷವನ್ನು ದೇಶದಲ್ಲಿ ಬೇರಿನಿಂದ ಕಿತ್ತೊಗೆಯುವ ಅವಶ್ಯವಿದೆ. ಅಲ್ಲಿವರೆಗೂ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದರು. ಮಹಿಳಾ ಮೋರ್ಚಾ ಜಿಲ್ಲಾಧ್ಯೆ ಗೌರಿ ಚಿಚಕೋಟೆ ಮಾತನಾಡಿ, ಮಹಿಳೆಯರಿಗೆ ಮೀಸಲಾತಿ ನೀಡಿದರೆ ನಮಗೆ ಉಳಿಗಾಲವಿಲ್ಲ ಎಂದು ಅರಿತ ಕಾಂಗ್ರೆಸ್ ವಿರೋಧಿಸುವ ಕೆಲಸ ಮಾಡಿದೆ. ಮಹಿಳಾ ಪರವಾದ ಬಿಲ್ ಒಂದು ಬಾರಿ ಸೋಲು ಕಂಡಿರಬಹುದು. ಆದರೆ ಮುಂಬರುವ ದಿನಗಳಲ್ಲಿ ಬಿಜೆಪಿ ಮಹಿಳೆಯರಿಗೆ ಸಮಾನತೆ ಕಲ್ಪಿಸುವ ಕೆಲಸ ಮಾಡಲಿದೆ ಎಂದು ತಿಳಿಸಿದರು. ಮಹಿಳಾ ಪ್ರಮುಖರಾದ ಮಹಾನಂದ ಸಾಹು, ಭಾಗ್ಯಲ್ಮ ನಾಯಿಕೋಡಿ ಮಾತನಾಡಿದರು. ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ, ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಕಾರ್ಯದರ್ಶಿ ಓಂಪ್ರಕಾಶ ಪಾಟೀಲ್, ಎಸ್ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವಕುಮಾರ ತೊಟ್ನಳ್ಳಿ, ತಾಲೂಕು ಅಧ್ಯಕ್ಷ ಶರಣು ಮೆಡಿಕಲ್, ಪುರಸಭೆ ಮಾಜಿ ಅಧ್ಯಕ್ಷರಾದ ಚನ್ನಮ್ಮ ಪಾಟೀಲ್, ಶೋಭಾ ಹೂಗಾರ, ಮಹಿಳಾ ಮೋರ್ಚಾ ತಾಲೂಕು ಅಧ್ಯೆ ಶೈಲಜಾ ಹಿತ್ತಲ್, ಪ್ರಮುಖರಾದ ರಾಮು ಕಣೇಕಲ್, ನಾಗರಾಜ ತೊಟ್ನಳ್ಳಿ, ನಾಗಪ್ಪ ಕೊಳ್ಳಿ, ತಿರುಪತಿ ಶಹಾಬಾದಕರ್, ರಾವೇಂದ್ರ ಮೆಕಾನಿಕ್, ಶಿವಾನಂದಸ್ವಾಮಿ, ವೀರೇಶ ಹೂಗಾರ, ವಿನೋದ ಸಾಹುಕಾರ ದುಗನೂರ, ವಿಜಯಲ್ಮ ವಿಶ್ವಕರ್ಮ, ಸಂಗಪ್ಪ ಕುಂಬಾರ, ಸಾಗರ ಕಲಕಂಭ, ರಾಜು ಕಟ್ಟಿ, ಸಿದ್ದಲಿಂಗ ಗೌತಂ, ಸಿದ್ದು ಊಡಗಿ, ಮಹಾವೀರ ಅಳ್ಳೊಳ್ಳಿ, ದಿನೇಶ ನಾಯ್ಕೋಡಿ, ಶ್ರೀಮಂತ ಅವಂಟಿ, ದೇವಿಂದ್ರಪ್ಪ ಕೊಟ್ರಕಿ, ಶಿವಕುಮಾರ ಪಾಗಾ, ಮಹಾಂತೇಶ ಊಡಗಿ, ಬಾಲರಾಜ್ ಕೊಡಸಾ, ಶಿಲ್ಪಾ ಪಾಟೀಲ್, ಸರಿತಾ ಕುಲಕರ್ಣಿ, ಜಯಶ್ರೀ ಬೋಳದ, ಜೈಪ್ರಕಾಶ ರಾಠೋಡ್ ಇತರರಿದ್ದರು.
ಇನ್ನಷ್ಟು ಓದಿ
ಇನ್ನಷ್ಟು ಓದಿ

