ಕೊಪ್ಪಳ : ತಾಲೂಕಿನ ತಾಳಕನಕಾಪೂರ ಗ್ರಾಮದಲ್ಲಿ ಇತ್ತಿಚಿಗೆ ಶ್ರೀ ದ್ಯಾಮಮ್ಮ ದೇವಸ್ಥಾನ ಉದ್ಘಾಟನೆ, ಕಳಸಾರೋಹಣ, ಹಾಗೂ ಶ್ರೀ ದ್ಯಾಮಮ್ಮದೇವಿ ಜಾತ್ರಾ ಮಹೋತ್ಸವ ಐದು ದಿನಗಳ ಕಾಲ ವಿಜೃಂಭಣೆಯಿಂದ ಜರುಗಿತು.
ಜಾತ್ರಾ ಮಹೋತ್ಸವದ ನಿಮಿತ್ಯ ದೇವಸ್ಥಾನದ ಉದ್ಘಾಟನೆ ಹಾಗೂ ಕಳಸಾರೋಹಣವನ್ನು ಬಿಸರಳ್ಳಿಯ ಶ್ರೀ ಗವಿಮಠದ ಶಾಖಾಮಠದ ಶ್ರೀ ಶಿವಶಾಂತವೀರ ಸ್ವಾಮಿಗಳು ಇತ್ತಿಚೇಗೆ ನೆರವೇರಿಸಿದರು ಹಾಗೂ ಅಂದು ಚಂಡಿಹೋಮದ ಮೂಲಕ ಧಾರ್ಮಿಕ ಕಾರ್ಯಕ್ರಮ ಜರುಗಿತು.
ಜಾತ್ರಾ ಮಹೋತ್ಸವದ ನಿಮಿತ್ಯ ದೇವಸ್ಥಾನದ ಉದ್ಘಾಟನೆ ಹಾಗೂ ಕಳಸಾರೋಹಣವನ್ನು ಬಿಸರಳ್ಳಿಯ ಶ್ರೀ ಗವಿಮಠದ ಶಾಖಾಮಠದ ಶ್ರೀ ಶಿವಶಾಂತವೀರ ಸ್ವಾಮಿಗಳು ಇತ್ತಿಚೇಗೆ ನೆರವೇರಿಸಿದರು ಹಾಗೂ ಅಂದು ಚಂಡಿಹೋಮದ ಮೂಲಕ ಧಾರ್ಮಿಕ ಕಾರ್ಯಕ್ರಮ ಜರುಗಿತು.
ಗ್ರಾಮ ಚಿಕ್ಕದಾಗಿದ್ದರೂ ಸಂಸ್ಕಾರ ಹಾಗೂ ಭಕ್ತಿಯ ನೆಲೆ
ತಾಳಕನಕಾಪೂರ ಗ್ರಾಮ ಚಿಕ್ಕದಾಗಿದ್ದರೂ ಸಹ ಸಂಸ್ಕಾರ ಹಾಗೂ ಭಕ್ತಿಯ ನೆಲೆಯಾಗಿದೆ ಎಂದು ಬಿಸರಳ್ಳಿಯ ಶ್ರೀ ಗವಿಮಠದ ಶಾಖಾಮಠದ ಶ್ರೀ ಶಿವಶಾಂತವೀರ ಸ್ವಾಮಿಗಳು ಹೇಳಿದರು.ತಾಲೂಕಿನ ತಾಳಕನಕಾಪೂರ ಗ್ರಾಮದಲ್ಲಿ ಇತ್ತಿಚಿಗೆ ಜರುಗಿದ ದೇವಸ್ಥಾನ ಉದ್ಘಾಟನೆ ಹಾಗೂ ಕಳಸಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು. ಇಂದಿನ ಕಾಲದಲ್ಲಿ ವಿವಿಧ ದುಶ್ಚಟಗಳಿಂದ ಗ್ರಾಮಗಳು ಹಾದಿ ತಪ್ಪುತ್ತಿದ್ದು ಮಾತೆಯರು ತಮ್ಮ ಕುಟುಂಬ ಹಾಗೂ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಿ ಕುಟುಂಬ ರಕ್ಷಣೆ ಮಾಡಿಕೊಳ್ಳಬೇಕು. ತಾಯಂದಿರು ಮಕ್ಕಳನ್ನು ಮೊಬೈಲ್ ನಿಂದ ದೂರವಿಟ್ಟು ಶಿಕ್ಷಣವಂತರನ್ನಾಗಿ ಮಾಡಿ ಪ್ರತಿಯೊಂದ ಮಗುವಿಗು ಶಿಕ್ಷಣ ಕೊಡಿಸಲು ಪಾಲಕರು ಹಾಗೂ ಗ್ರಾಮದ ಮುಖಂಡರು ಕಾಳಜಿವಹಿಸಬೇಕೆಂದು ಸಲಹೆ ನೀಡಿದರು.
ಗ್ರಾಮದೇವತೆಯ ದೇವಸ್ಥಾನ ಪುನ್ ನಿಮಾರ್ಣ ಮಾಡಿ ಕಳಸಾರೋಹಣ ನೆರವೇರಿಸಿರುವುದು ಗ್ರಾಮದ ಸಕಲ ಅಭಿವೃದ್ಧಿಗೆ ದೇವಿಯ ಆರ್ಶೀವಾದ ಲಭಿಸಲಿದೆ. ಪ್ರಕೃತಿ ಹಾಗೂ ಮನುಷ್ಯನಿಗೆ ದೇವಸ್ಥಾನಗಳು ಸಂಪರ್ಕ ಕೊಂಡಿಯಂತೆ ಕೆಲಸ ನಿರ್ವಹಿಸುತ್ತವೆ. ಪ್ರತಿಯೊಬ್ಬರಲ್ಲಿಯು ಧರ್ಮ ಜಾಗೃತಿ ಅಗತ್ಯ ಎಂದು ಹೇಳಿದರು.
ಒಗ್ಗಟ್ಟಿನಿಂದ ಮಾತ್ರ ಗ್ರಾಮಗಳ ಅಭಿವೃದ್ಧಿ
ಗ್ರಾಮೀಣ ಭಾಗದ ಅಭಿವೃದ್ಧಿಗೆ ಒಗ್ಗಟ್ಟು ಮುಖ್ಯ, ಅಭಿವೃದ್ಧಿ ಹಾಗೂ ಭಕ್ತಿಗೆ ತಾಳಕನಕಾಪೂರ ಇತರ ಗ್ರಾಮಗಳಿಗೆ ಮಾದರಿ ಎಂದು ಮಾಜಿ ಸಂಸದ ಸಂಗಣ್ಣ ಕರಡಿ ಹೇಳಿದರು. ಗ್ರಾಮೀಣ ಭಾಗಗಳ ಸುಧಾರಣೆ ಅವಶ್ಯಕವಾಗಿದ್ದು ಗ್ರಾಮದ ಸರ್ವರ ಒಗ್ಗಟ್ಟು ಹಾಗೂ ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು. ಗ್ರಾಮದಲ್ಲಿ ದೇವಿ ದೇವಸ್ಥಾನವನ್ನು ಪುನರ್ ನಿಮಾರ್ಣ ಮಾಡಿ ಒಗ್ಗಟ್ಟಿನಿಂದ ಮತ್ತು ಶ್ರದ್ದಾ ಭಕ್ತಿಯಿಂದ ದೇವಿ ಜಾತ್ರೆ ಮಾಡಿ ಸಣ್ಣ ಗೊಂದಲವಿಲ್ಲದೆ ವಿಜೃಂಭಣೆಯಿಂದ ಜಾತ್ರೆ ಆಚರಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆಂದು ಪ್ರಶಂಸಿದರು.
ಜಿ.ಪಂ ಮಾಜಿ ಸದಸ್ಯ ರಾಮಣ್ಣ ಚೌಡ್ಕಿ, ಹನುಮಂತಪ್ಪ ಅರಸನಕೇರಿ, ಮಹಾಂತೇಶ ಸಂಗಟಿ, ಸಂಗಮೇಶ ಬಾಗವಾಡಗಿ, ಗಂಗಾಧರಸ್ವಾಮಿ ಇರಕಲ್ಲಗಡ, ಮಂಜುನಾಥ ಬಿ.ಟಿ.ಪಾಟೀಲ, ವೆಂಕಟೇಶ ಜಬ್ಬಲಗುಡ್ಡ, ಮಂಜುನಾಥ ನಿಟ್ಟಾಲಿ, ಕಲಕೇರಿ ಗ್ರಾ.ಪಂ ಮಾಜಿ ಅಧ್ಯಕ್ಷ ಶೇಖರಪ್ಪ ಹಟ್ಟಿ ಇತರರಿದ್ದರು.
ಇನ್ನಷ್ಟು ಓದಿ

