Dailyhunt Logo
  • Light mode
    Follow system
    Dark mode
    • Play Story
    • App Story
IND vs ENG: ಪವರ್‌ಪ್ಲೇನಲ್ಲಿ ಹರ್ಷಿತ್‌ ರಾಣಾಗೆ ಬ್ಯಾಟಿಂಗ್‌ ನೀಡಿದ್ದಕ್ಕೆ ದಿನೇಶ್‌ ಕಾರ್ತಿಕ್‌ ಆಕ್ರೋಶ!

IND vs ENG: ಪವರ್‌ಪ್ಲೇನಲ್ಲಿ ಹರ್ಷಿತ್‌ ರಾಣಾಗೆ ಬ್ಯಾಟಿಂಗ್‌ ನೀಡಿದ್ದಕ್ಕೆ ದಿನೇಶ್‌ ಕಾರ್ತಿಕ್‌ ಆಕ್ರೋಶ!

Vishwavani 1 week ago

ನಾಟಿಂಗ್‌ಹ್ಯಾಮ್‌: ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20ಐ ಪಂದ್ಯದಲ್ಲಿ (IND vs ENG) ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಅನುಸರಿಸಿದ ತಂತ್ರಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ (Dinesh Karthik) ಕೂಡ ಕಾಮೆಂಟರಿ ಮಾಡುತ್ತಿದ್ದ ವೇಳೆ ಪ್ರತಿಕ್ರಿಯೆ ನೀಡಿದ್ದಾರೆ.

ಅದರಲ್ಲಿಯೂ ವಿಶೇಷವಾಗಿ ಭಾರತ ತಂಡದ ಇನಿಂಗ್ಸ್‌ ವೇಳೆ ಪವರ್‌ಪ್ಲೇನಲ್ಲಿ ಶಿವಂ ದುಬೇ ಅವರು ವೇಗದ ಬೌಲರ್‌ ಹರ್ಷಿತ್‌ ರಾಣಾ ಅವರನ್ನು ಕ್ರೀಸ್‌ಗೆ ಕಳುಹಿಸಿದ್ದಕ್ಕೆ ಆರ್‌ಸಿಬಿ ಮೆಂಟರ್‌ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಂತಿಮವಾಗಿ ಭಾರತ ತಂಡ ಕೇವಲ 76 ರನ್‌ಗಳಿಗೆ ಆಲ್‌ಔಟ್‌ ಆಗುವ ಮೂಲಕ 125 ರನ್‌ಗಳಿಂದ ಸೋಲು ಅನುಭವಿಸಿತು.

ಜುಲೈ 7 ರಂದು ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ ತಂಡದ ಬಲಿಷ್ಠ ಬ್ಯಾಟಿಂಗ್ ಪಡೆ ಇಂಗ್ಲೆಂಡ್ ಬೌಲರ್‌ಗಳ ದಾಳಿಗೆ ತತ್ತರಿಸಿತು. ಪರಿಣಾಮವಾಗಿ, ಪವರ್‌ಪ್ಲೇ ಮುಗಿಯುವ ಮುನ್ನವೇ ಭಾರತದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ವಿಕೆಟ್‌ ಒಪ್ಪಿಸಿದರು. ಪವರ್‌ಪ್ಲೇನಲ್ಲಿ ಮೊದಲ ಆರು ಓವರ್‌ಗಳಲ್ಲೇ ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಹಾಗೂ ಅಕ್ಷರ್ ಪಟೇಲ್ ವಿಕೆಟ್ ಕಳೆದುಕೊಂಡು ಭಾರತ ಸಂಕಷ್ಟಕ್ಕೆ ಸಿಲುಕಿತು.

IND vs ENG: ಹೀನಾಯ ಸೋಲಿನ ಬಳಿಕ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಭಾರತ ತಂಡ!

ಈ ಸಂದರ್ಭದಲ್ಲಿ ತಂಡದ ಇನಿಂಗ್ಸ್‌ ಸಂಪೂರ್ಣ ಹಿನ್ನಡೆಯಲ್ಲಿದ್ದರೂ, ಗೌತಮ್ ಗಂಭೀರ್ ನೇತೃತ್ವದ ಟೀಮ್‌ ಮ್ಯಾನೇಜ್‌ಮೆಂಟ್‌ ಅಚ್ಚರಿಯ ನಿರ್ಧಾರವನ್ನು ಕೈಗೊಂಡಿತು. ಆಲ್‌ರೌಂಡರ್ ಶಿವಂ ದುಬೇ ಅವರನ್ನು ಕಳುಹಿಸುವ ಬದಲು, ವೇಗದ ಬೌಲರ್ ಹರ್ಷಿತ್ ರಾಣಾ ಅವರನ್ನು ಬ್ಯಾಟಿಂಗ್‌ಗೆ ಬಡ್ತಿ ನೀಡಿ ಕ್ರೀಸ್‌ಗೆ ಕಳುಹಿಸಲಾಯಿತು. ಈ ತೀರ್ಮಾನವು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಯಿತು.

ಹರ್ಷಿತ್‌ ರಾಣಾಗೆ ಪವರ್‌ಪ್ಲೇನಲ್ಲಿ ಬ್ಯಾಟಿಂಗ್‌ ನಡೆಸಿದ್ದು ನಾನು ನೋಡಿಯೇ ಇಲ್ಲ

"ಶಿವಂ ದುಬೆಗಿಂತ ಮೊದಲು ಹರ್ಷಿತ್ ರಾಣಾ ಅವರನ್ನು ಬ್ಯಾಟಿಂಗ್‌ಗೆ ಕಳುಹಿಸಿದ್ದಾರಾ? ಇದು ತಮಾಷೆಯೇ? ದೇಶಿ ಕ್ರಿಕೆಟ್‌ನಲ್ಲಿಯೂ ಪವರ್‌ಪ್ಲೇ ವೇಳೆ ಹರ್ಷಿತ್ ರಾಣಾ ಬ್ಯಾಟಿಂಗ್ ನಡೆಸಿರುವುದನ್ನು ನಾನು ನೋಡಿಲ್ಲ," ಎಂದು ಕಾಮೆಂಟರಿ ವೇಳೆ ಮಾಜಿ ಭಾರತೀಯ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅಚ್ಚರಿ ವ್ಯಕ್ತಪಡಿಸಿದರು.

IND vs ENG: ಸಂಜು ಸ್ಯಾಮ್ಸನ್‌ಗೆ ಇದು ಕೊನೆಯ ಟಿ20ಐ ಸರಣಿ? ಸ್ಪಷ್ಟನೆ ನೀಡಿದ ಗೌತಮ್‌ ಗಂಭೀರ್‌!

"ಟಿ20 ಕ್ರಿಕೆಟ್‌ನಲ್ಲಿ ಎಡಗೈ-ಬಲಗೈ ಬ್ಯಾಟರ್‌ಗಳ ಸಂಯೋಜನೆಯನ್ನು ಬಳಸಬಹುದು. ಆದರೆ ಅದಕ್ಕೂ ಒಂದು ಮಿತಿಯಿದೆ. ಶಿವಂ ದುಬೆಗಿಂತ ಮೊದಲು ಹರ್ಷಿತ್ ರಾಣಾ ಅವರನ್ನು ಕಳುಹಿಸುವ ನಿರ್ಧಾರವನ್ನು ಸಮರ್ಥಿಸಲು ಸಾಧ್ಯವಿಲ್ಲ," ಎಂದು ಅವರು ಹೇಳಿದರು.

ಭಾರತದ ಬ್ಯಾಟಿಂಗ್ ಆರಂಭದಿಂದಲೇ ಹಿನ್ನಡೆಯಲ್ಲಿದ್ದು, ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಕಳಪೆ ಪ್ರದರ್ಶನವನ್ನು ತೋರುತ್ತಿದೆ. ಟ್ರೆಂಟ್ ಬ್ರಿಡ್ಜ್‌ನಲ್ಲಿ ಇಂಗ್ಲೆಂಡ್‌ ನೀಡಿದ್ದ 202 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, ಕೇವಲ 76 ರನ್‌ಗಳಿಗೆ ಆಲೌಟ್ ಆಗಿದ್ದು, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನ ಎರಡನೇ ಕನಿಷ್ಠ ಮೊತ್ತವನ್ನು ದಾಖಲಿಸಿತು.

Dailyhunt
Disclaimer: This content has not been generated, created or edited by Dailyhunt. Publisher: Vishwavani