Photo and video credit: High Court of Karnataka (Video and photo is for only information purpose) ಕರ್ನಾಟಕ ಹೈಕೋರ್ಟ್ನ ವಿಚಾರಣಾ ಕಲಾಪಗಳಲ್ಲಿ ಎಷ್ಟೋ ಗಂಭೀರ ಪ್ರಕರಣಗಳು ಬರುತ್ತವೆ. ಆದರೆ ಇತ್ತೀಚೆಗೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಮುಂದೆ ಬಂದ ವಿಚಿತ್ರ ಹಾಗೂ ಅಷ್ಟೇ ಹಾಸ್ಯಾಸ್ಪದ ಪ್ರಕರಣವೊಂದು ನ್ಯಾಯಾಲಯದಲ್ಲಿದ್ದವರನ್ನು ಕೆಲಕಾಲ ಮೌನವಾಗಿಸಿ, ನಂತರ ಮುಗುಳುನಗುವಂತೆ ಮಾಡಿತು.
ಪ್ರಕರಣದ ಹಿನ್ನೆಲೆ
ಪ್ರಕರಣ ರದ್ದುಗೊಳಿಸುವಂತೆ ಕೋರಿ ಆ ವ್ಯಕ್ತಿ ಹೈಕೋರ್ಟ್ ಮೆಟ್ಟಿಲೇರಿದಾಗ, ಈ ವಿಚಾರಣೆ ಜಸ್ಟಿಸ್ ಎಂ. ನಾಗಪ್ರಸನ್ನ ಅವರ ಪೀಠದ ಮುಂದೆ ಬಂತು.
ನ್ಯಾಯಮೂರ್ತಿಗಳ ಚಟಾಕಿ ಹಾಗೂ ಪ್ರತಿಕ್ರಿಯೆ
ಹಲವು ವರ್ಷಗಳ ಸಮ್ಮತಿಯ ಸಂಬಂಧವನ್ನು, ಗಂಡನಿಗೆ ಸಿಕ್ಕಿಬಿದ್ದ ತಕ್ಷಣ ಅತ್ಯಾಚಾರವೆಂದು ಬಿಂಬಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಹೈಕೋರ್ಟ್, 63 ವರ್ಷದ ವ್ಯಕ್ತಿಯ ವಿರುದ್ಧ ಸಲ್ಲಿಸಲಾಗಿದ್ದ ಎಫ್ಐಆರ್ ಹಾಗೂ ಕ್ರಿಮಿನಲ್ ನಡಾವಳಿಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಆದೇಶಿಸಿತು. ನ್ಯಾಯಾಲಯದ ಕಲಾಪದಲ್ಲಿ ಬಂದ ಈ ವಿಚಿತ್ರ ಕೇಸ್ ಮತ್ತು ಜಸ್ಟಿಸ್ ನಾಗಪ್ರಸನ್ನ ಅವರ ಸಮಯಪ್ರಜ್ಞೆಯ ಮಾತುಗಳು ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ವೈರಲ್ ಆಗಿವೆ.
pic.twitter.com/TrOmdg6knA - Shilpa (@shilpa_cn)

