Dailyhunt Logo
  • Light mode
    Follow system
    Dark mode
    • Play Story
    • App Story
ಎಷ್ಟು ಸಿಂಪಲ್ ಇವರು.. ಪ್ರಮಾಣ ವಚನದ ಬಳಿಕ ನಡೆದುಕೊಂಡೇ ವಿಧಾನ ಸೌಧಕ್ಕೆ ಹೋದ ಕೃಷ್ಣ ಭೈರೇಗೌಡ: Video

ಎಷ್ಟು ಸಿಂಪಲ್ ಇವರು.. ಪ್ರಮಾಣ ವಚನದ ಬಳಿಕ ನಡೆದುಕೊಂಡೇ ವಿಧಾನ ಸೌಧಕ್ಕೆ ಹೋದ ಕೃಷ್ಣ ಭೈರೇಗೌಡ: Video

Photo Courtesy X

ಬೆಂಗಳೂರು: ಡಿಕೆ ಶಿವಕುಮಾರ್ ಸಚಿವ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಕೃಷ್ಣ ಭೈರೇಗೌಡ ಅವರ ಸರಳ ನಡೆ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ಕೃಷ್ಣ ಭೈರೇಗೌಡ ಅವರು ರಾಜ್ಯದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ವಿಧಾನಸೌಧಕ್ಕೆ ಹೋಗುವ ವೇಳೆ ವಾಹನವನ್ನು ಬಳಸುವ ಬದಲು ನಡೆದುಕೊಂಡೆ ಹೋಗಿದ್ದಾರೆ.
ಸಿಎಂ ಪ್ರಮಾಣವಚನ ಹಿನ್ನೆಲೆ ವಿಧಾನಸೌಧದ ಸುತ್ತಾ ವಾಹನ ದಟ್ಟಣೆಯಿರುವುದರಿಂದ ಅದನ್ನು ತಪ್ಪಿಸುವ ಸಲುವಾಗಿ ಕೃಷ್ಣ ಭೈರೇಗೌಡ ಅವರು ನಡೆದುಕೊಂಡು ವಿಧಾನಸೌಧಕ್ಕೆ ತೆರಳಿದ್ದಾರೆ.

ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೆಚ್ಚಿನ ಸೆಕ್ಯೂರಿಟಿ ಇಲ್ಲದೆ, ಜನ ಸಾಮಾನ್ಯರಂತೆ ವಿಧಾನಸೌಧಕ್ಕೆ ಕಾಲ್ನಡಿಗೆಯಲ್ಲಿ ತೆರಳಿದ್ದಾರೆ. ಇಂದು ನಗರದಾದ್ಯಂತ ಹೆಚ್ಚಿನ ಜನಸಂದಣಿ ಇದ್ದ ಹಿನ್ನೆಲೆ ಸಚಿವರು ಹೀಗೇ ನಡೆದುಕೊಂಡರು ಎನ್ನಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Webduniya Kannada