Dailyhunt Logo
  • Light mode
    Follow system
    Dark mode
    • Play Story
    • App Story
ಜಾರ್ಖಂಡ್ ವಿದ್ಯಾರ್ಥಿ ಪ್ರತಿಭಟನೆ: ಸೋನಮ್ ವಾಂಗ್ಚುಕ್  ಕರೆ ಬರುತ್ತಿದ್ದ ಹಾಗೇ ಉಪವಾಸ ಸತ್ಯಾಗ್ರಹ ನಿಲ್ಲಿಸಿದ ದೇವೇಂದ್ರ ನಾಥ್

ಜಾರ್ಖಂಡ್ ವಿದ್ಯಾರ್ಥಿ ಪ್ರತಿಭಟನೆ: ಸೋನಮ್ ವಾಂಗ್ಚುಕ್ ಕರೆ ಬರುತ್ತಿದ್ದ ಹಾಗೇ ಉಪವಾಸ ಸತ್ಯಾಗ್ರಹ ನಿಲ್ಲಿಸಿದ ದೇವೇಂದ್ರ ನಾಥ್

Photo Credit X

ವದೆಹಲಿ: ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗ ಮತ್ತು ಜಾರ್ಖಂಡ್ ಸಿಬ್ಬಂದಿ ಆಯ್ಕೆ ಆಯೋಗ ನಡೆಸಿದ ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ವಿದ್ಯಾರ್ಥಿ ನಾಯಕ ದೇವೇಂದ್ರ ನಾಥ್ ಮಹ್ತೋ, ತಮ್ಮ ಉಪವಾಸದ ನಾಲ್ಕನೇ ದಿನವಾದ ಬುಧವಾರ ಇಂದು ನೀರು ಸೇವಿಸಿದರು.
ಪರಿಸರ ಹೋರಾಟಗಾರ ಸೋನಮ್ ವಾಂಗ್‌ಚುಕ್ ಅವರು ವಿಡಿಯೋ ಕರೆಯ ಮೂಲಕ ಮನವಿ ಮಾಡಿದ ನಂತರ ತಾವು ನೀರು ಸೇವಿಸಲು ನಿರ್ಧರಿಸಿದ್ದಾಗಿ ಮಹ್ತೋ ತಿಳಿಸಿದರು.
ಆದಾಗ್ಯೂ, ವಿದ್ಯಾರ್ಥಿಗಳ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುವವರೆಗೂ ಉಪವಾಸ ಸತ್ಯಾಗ್ರಹ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದರು.


ರಾಂಚಿಯ ಜೈಪಾಲ್ ಸಿಂಗ್ ಮುಂಡಾ ಕ್ರೀಡಾಂಗಣದಲ್ಲಿ ಮಹ್ತೋ ಭಾನುವಾರ ರಾತ್ರಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು; ಇಲ್ಲಿ ವಿದ್ಯಾರ್ಥಿಗಳು ವಿವಿಧ ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳ ಆರೋಪದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಹೋರಾಟವು ಬುಧವಾರಕ್ಕೆ 12ನೇ ದಿನಕ್ಕೆ ಕಾಲಿಟ್ಟಿತು. ಜುಲೈ 25 ರಂದು ವಿಶಾಲ ಮಟ್ಟದ ಸತ್ಯಾಗ್ರಹ ಆರಂಭವಾದರೆ, ತಾವು ಆಗಸ್ಟ್ 2 ರಂದು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದಾಗಿ ಮಹ್ತೋ ಹೇಳಿದರು.

ಮಹ್ತೋ ಅವರ ಪ್ರಕಾರ, ವಾಂಗ್‌ಚುಕ್ ಅವರು ವಿದ್ಯಾರ್ಥಿಗಳ ಚಳುವಳಿಗೆ ಬೆಂಬಲ ವ್ಯಕ್ತಪಡಿಸಿದರು, ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಿದರು ಮತ್ತು ಅವರ ಶಾಂತಿಯುತ ಪ್ರಜಾಸತ್ತಾತ್ಮಕ ಪ್ರತಿಭಟನೆಯನ್ನು ಶ್ಲಾಘಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Webduniya Kannada