Photo Courtesy X
ಮುಂಬೈ: ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಸ್ಟ್ಯಾಂಡ್ ಅಪ್ ಹಾಸ್ಯನಟರು ಎಲ್ಲಾ ಮಿತಿಗಳನ್ನು ಮೀರುತ್ತಿದ್ದಾರೆ ಮತ್ತು ಅವರಿಗೆ ಸರಿಯಾದ ಪಾಠ ಕಲಿಸಬೇಕಾಗಿದೆ ಎಂದು ಶಿವಸೇನಾ ನಾಯಕಿ ಮನೀಷಾ ಕಾಯಂಡೆ ಎಂದು ಹೇಳಿದರು.ರಾಜ್ಯ ವಿಧಾನಸಭೆಯ ಮುಂಬರುವ ಮಳೆಗಾಲದ ಅಧಿವೇಶನದಲ್ಲಿ ಅಂತಹ ಕೃತ್ಯಗಳ ವಿರುದ್ಧ ನಿರ್ಣಯ ಮಂಡಿಸುವುದಾಗಿ ಶನಿವಾರ ಹೇಳಿದ್ದಾರೆ.
ಅಂತಹ ಸ್ಟ್ಯಾಂಡ್ ಅಪ್ ಹಾಸ್ಯನಟರಿಗೆ ಪಾಠ ಕಲಿಸಬೇಕು. ಅವರು ಎಲ್ಲ ಮಿತಿಗಳನ್ನು ದಾಟಿ ಯಾರನ್ನಾದರೂ ಗೇಲಿ ಮಾಡುತ್ತಿದ್ದಾರೆ. ಅವರು ಏನು ಬೇಕಾದರೂ ಹೇಳುತ್ತಾರೆ. ಮುಂಬರುವ ಮಳೆಗಾಲದ ಅಧಿವೇಶನದಲ್ಲಿ ಅಂತಹ ಕೃತ್ಯಗಳ ವಿರುದ್ಧ ನಿರ್ಣಯ ಮಂಡಿಸುತ್ತೇನೆ ಎಂದು ಕಾಯಂಡೆ ಹೇಳಿದರು.

