Dailyhunt
ನಾನು ಸೂಪರ್ ಸಿಎಂ ಅಲ್ಲ-ವಿಜಯೇಂದ್ರ

ನಾನು ಸೂಪರ್ ಸಿಎಂ ಅಲ್ಲ-ವಿಜಯೇಂದ್ರ

ನಾನು ಸೂಪರ್ ಸಿಎಂ ಅಲ್ಲ. ಸೂಪರ್ ಸಿಎಂ ಟ್ಯಾಗ್‌ನಿಂದ ಹೊರಗೆ ಬಂದಿದ್ದಕ್ಕೆ ಖುಷಿಯಾಗಿದೆ ಅಂತಾ ಬಿಜೆಪಿ ಬಿಎಸ್‌ವೈ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ. ಸರ್ವಾನುಮತದಿಂದ ಬಸವರಾಜ್ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಲಾಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲಿದ್ದಾರೆ. ೧೭ ಜನ ಶಾಸಕರು ಪಕ್ಷ ಮತ್ತು ಯಡಿಯೂರಪ್ಪನವರನ್ನು ನಂಬಿಕೊಂಡು ಬಂದಿದ್ದಾರೆ. ಮುಂದೆಯೂ ಅವರನ್ನು ಉತ್ತಮ ರೀತಿಯಲ್ಲಿ ಪಕ್ಷ ನಡೆಸಿಕೊಳ್ಳಲಿದೆ ಅಂತಾ ವಿಜಯೇಂದ್ರ ಹೇಳಿದ್ರು.
Dailyhunt
Disclaimer: This content has not been generated, created or edited by Dailyhunt. Publisher: Webduniya Kannada