ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ದರ್ಗಾ ವಿವಾದ ಮುಂದಿಟ್ಟು ತೊಡೆ ತಟ್ಟಿ ರಾಜಕೀಯ ಹೋರಾಟಕ್ಕೆ ನಿಂತಿದ್ದಾರೆ. ಮೈಸೂರಿನ ಕೆಡಿಪಿ ಮೀಟಿಂಗ್ ನಲ್ಲಿ ಜಿಲ್ಲಾಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸಂಸದ ಪ್ರತಾಪ್ ಸಿಂಹ, ದರ್ಗಾಗಳನ್ನು ಬಿಟ್ಟು ದೇವಸ್ಥಾನಗಳನ್ನು ಏಕೆ ಟಾರ್ಗೆಟ್ ಮಾಡಿದ್ದೀರಾ. ಈ ತನಕ ಎಷ್ಟು ಅನಧೀಕೃತ ದರ್ಗಾ ತೆರವು ಮಾಡಿದ್ದೀರಾ ಅಂತ ಖಡಕ್ ಆಗಿ ಪ್ರಶ್ನಿಸಿದರು. ಹಿಂದೂಗಳು ಮಚ್ಚು ಲಾಂಗು ಹಿಡಿಯೋದಿಲ್ಲ ಅಂತ ದೇವಸ್ಥಾನಗಳನ್ನು ಟಾರ್ಗೆಟ್ ಮಾಡುತ್ತಿದ್ದೀರಾ ಅಂತ ಪ್ರತಾಪ್ ಸಿಂಹ ಜಿಲ್ಲಾಡಳಿತಕ್ಕೆ ಸರಣಿ ಪ್ರಶ್ನೆಗಳ ಸುರಿಮಳೈಗೈಯ್ದರು.