ಸಾಂಸ್ಕ್ರತಿಕ ನಗರಿ ಮೈಸೂರಿನ ದೇವರಾಜ ಅರಸ್ ರಸ್ತೆಯಲ್ಲಿರುವ ದರ್ಗಾ ವಿವಾದ ಮತ್ತೆ ಮುನ್ನಲೆಗೆ ಬಂದಿದೆ.1975 ರ ತನಕ ದೇವರಾಜ ಅರಸ್ ರಸ್ತೆಯನ್ನು ಶನಿದೇವರ ಗುಡಿ ಬೀದಿ ಅಂತ ಕರೆಯಲಾಗುತ್ತಿತ್ತು. ರಸ್ತೆ ಅಗಲೀಕರಣದ ವೇಳೆ ದರ್ಗಾ ಪಕ್ಕದಲ್ಲಿದ್ದ ಶನಿದೇವರ ಗುಡಿಯನ್ನು ಸ್ಥಳಾಂತರ ಮಾಡಲಾಯಿತು. ಆದರೆ ದರ್ಗಾ ಹಾಗೆ ಉಳಿಯಿತು. ಅಲ್ಲಿರುವುದು ಅನಧೀಕೃತ ದರ್ಗಾವಾಗಿದ್ದು, ಕೂಡಲೇ ತೆರವು ಮಾಡಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.
ಆದರೆ ಇದೇ ವಿಚಾರವಾಗಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಬೇರೆಯದೇ ವಾದ ಮಾಡುತ್ತಾರೆ. ದೇವರಾಜ್ ಅರಸ್ ರಸ್ತೆಯ ಮನೆಯೊಳಗೆ ಈ ದರ್ಗಾವಿತ್ತು. ರಸ್ತೆ ಅಗಲೀಕರಣದ ವೇಳೆ ದರ್ಗಾ ರಸ್ತೆಗೆ ಬಂದಿದೆ ಎನ್ನುತ್ತಾರೆ. ಫುಟ್ ಪಾತ್ ಆವರಿಸಿಕೊಂಡಿರುವ ದರ್ಗಾ ತೆರವು ಮಾಡಬೇಕು ಅಂತ ಬಿಜೆಪಿ ಒತ್ತಾಯಿಸಿದ್ರೆ, ದರ್ಗಾ ತೆರವು ಮಾಡಲು ಮುಂದಾದ್ರೆ ನಾವೇನು ಬಳೆ ತೊಟ್ಟು ಕೂರುತ್ತೇವಾ ಅಂತಾರೆ ಕಾಂಗ್ರೆಸಿಗರು ಕೇಸರಿ ಪಾಳೆಯಕ್ಕೆ ಸವಾಲು ಹಾಕಿದೆ.
