Dailyhunt
ಮೋದಿ ಅಮಿತ್ ಷಾ ಅಜೇಯರಲ್ಲ ಎಂಬುದು ಸಾಬೀತಾಗಿದೆ : ಶಿವಸೇನೆ

ಮೋದಿ ಅಮಿತ್ ಷಾ ಅಜೇಯರಲ್ಲ ಎಂಬುದು ಸಾಬೀತಾಗಿದೆ : ಶಿವಸೇನೆ

ಈ ಸಂಜೆ 4 years ago

ಮುಂಬೈ,ಮೇ 3-ಪಶ್ಚಿಮ ಬಂಗಾಳ ಚುನಾವಣೆ ನಂತರ ದೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಗೃಹಸಚಿವ ಅಮಿತ್ ಷಾ ಅಜೇಯರಲ್ಲ ಎಂಬುದು ಸಾಬೀತಾಗಿದೆ ಎಂದು ಶಿವಸೇನೆ ಆರೋಪಿಸಿದೆ.

ಪಂಚ ರಾಜ್ಯಗಳಿಗೆ ಚುನಾವಣೆ ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ತನ್ನ ಇಡಿ ಸಂಪುಟವನ್ನು ಪಶ್ಚಿಮ ಬಂಗಾಳದ ಚುನಾವಣೆಗೆ ಬಳಸಿಕೊಂಡರೂ ಯಾವುದೇ ಪ್ರಯೋಜನವಾಗದಿರುವುದರಿಂದ ಪಿಎಂ, ಹೆಚ್‍ಎಂ ಅಜೇಯರಲ್ಲ ಎಂಬುದು ಸಾಬೀತಾಗಿದೆ ಎಂದು ಶಿವಸೇನೆ ಮುಖವಾಣಿ ಸಾಮ್ನಾ ಸಂಪಾದಕಿಯದಲ್ಲಿ ಬರೆಯಲಾಗಿದೆ.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್‍ಸಿಪಿ ಪಕ್ಷಗಳ ಮೈತ್ರಿಯೊಂದಿಗೆ ಸರ್ಕಾರ ರಚನೆ ಮಾಡಿರುವ ಶಿವಸೇನೆ. ಬಂಗಾಳದಲ್ಲಿ ಚುನಾವಣೆ ಆಖಾಡಕ್ಕೆ ಇಳಿಯದೆ. ದೀದಿ ಪಕ್ಷಕ್ಕೆ ಬೆಂಬಲ ಘೋಷಿಸಿತ್ತು.

ಇದೀಗ ದೀದಿ ಅವರು ದಿಗ್ವಿಜಯಕ್ಕೆ ಅಭಿನಂದನೆ ಸಲ್ಲಿಸಿರುವ ಶಿವಸೇನೆ ತನ್ನ ಹಿಂದಿನ ಮಿತ್ರಪಕ್ಷವಾದ ಬಿಜೆಪಿ ವಿರುದ್ಧ ಹರಿಹಾಯ್ದಿದೆ.

Dailyhunt
Disclaimer: This content has not been generated, created or edited by Dailyhunt. Publisher: eesanje