Dailyhunt
ಮುಂಬೈ ತೊರೆದು ಕೋಲ್ಕತ ಸೇರ್ತಾರ ಹಿಟ್​​ಮ್ಯಾನ್​​?; ಪುಷ್ಠಿ ನೀಡುತ್ತಿವೆ ಫೋಟೋಗಳು

ಮುಂಬೈ ತೊರೆದು ಕೋಲ್ಕತ ಸೇರ್ತಾರ ಹಿಟ್​​ಮ್ಯಾನ್​​?; ಪುಷ್ಠಿ ನೀಡುತ್ತಿವೆ ಫೋಟೋಗಳು

ಕೋಲ್ಕತ: 17ನೇ ಆವೃತ್ತಿ ಐಪಿಎಲ್​ ಆರಂಭವಾಗುವುದಕ್ಕೂ ಮುನ್ನ ನಾಯಕತ್ವ ಸೇರಿದಂತೆ ಒಂದಿಲ್ಲೊಂದು ವಿಚಾರಕ್ಕೆ ಸದ್ದು ಮಾಡಿದ್ದ ಮುಂಬೈ ಇಂಡಿಯನ್ಸ್​ ಇದೀಗ ಮತ್ತೊಮ್ಮೆ ಸುದ್ದಿಯಾಗಿದೆ. 2025ರಲ್ಲಿ ನಡೆಯುವ 18ನೇ ಆವೃತ್ತಿಯ ಐಪಿಎಲ್​ನಲ್ಲಿ ರೋಹಿತ್​ ಶರ್ಮಾ ಮುಂಬೈ ಇಂಡಿಯನ್ಸ್​ ಪರ ಆಡುವುದಿಲ್ಲ ಎಂದು ಹೇಳಲಾಗಿದ್ದು, ಈ ವಿಚಾರಕ್ಕೆ ಇಂಬು ನೀಡುವಂತೆ ಕೋಲ್ಕತ ವಿರುದ್ಧದ ಪಂದ್ಯಗಳಲ್ಲಿ ಹಲವು ಘಟನೆಗಳು ನಡೆದಿವೆ.

ಮೇ 11ರಂದು ಪಂದ್ಯ ಶುರುವಾಗುವುದಕ್ಕೂ ಮುನ್ನ ಕೋಲ್ಕತ ತಂಡದ ಸಹಾಯಕ ಕೋಚ್​ ಅಭಿಷೇಕ್​ ನಾಯರ್​ ಮಾತುಕತೆಯಲ್ಲಿ ತೊಡಗಿದ್ದ ವಿಡಿಯೋ ವೈರಲ್​ ಆಗಿತ್ತು. ಈ ವೇಳೆ ರೋಹಿತ್​ ಆಡಿದ ಮಾತುಗಳು ಕ್ರೀಡಾ ವಲಯದಲ್ಲಿ ಹೊಸ ಚರ್ಚೆಯನ್ನೇ ಹುಟ್ಟು ಹಾಕಿತ್ತು. ಇದೀಗ ಇದಕ್ಕೆ ಪೂರಕವೆಂಬಂತೆ ಮತ್ತೊಂದು ಘಟನೆ ನಡೆದಿದೆ. ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಆರ್​ಸಿಬಿ-ಡೆಲ್ಲಿ ಪಂದ್ಯಕ್ಕೆ ಮಳೆ ಭೀತಿ; ಮಾಡು ಇಲ್ಲವೇ ಮಡಿ ಪರಿಸ್ಥಿತಿಯಲ್ಲಿ ಉಭಯ ತಂಡಗಳು

ವೈರಲ್ ಆಗಿರುವ ಫೋಟೋ ನೋಡುವುದಾದರೆ ಕೆಕೆಆರ್​ ಡಗೌಟ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡದ ಮಾಜಿ ನಾಯಕ ರೋಹಿತ್​ ಶರ್ಮಾ ಅಭಿಷೇಕ್​ ನಾಯರ್​ ಸೇರಿದಂತೆ ಇನ್ನಿತರರ ಜೊತೆ ಮಾತುಕತೆಯಲ್ಲಿ ತೊಡಗಿರುವುದನ್ನು ನೋಡಬಹುದಾಗಿದೆ. ಇದಕ್ಕೂ ಮುಂಚಿತವಾಗಿ ಅಭಿಷೇಕ್ ಜೊತೆ ಮಾತನಾಡುತ್ತಾ, ಎಲ್ಲವೂ ಒಂದೊಂದಾಗಿ ಬದಲಾಗುತ್ತಿದೆ. ಏನೇ ಆದರೂ ಅದು ನನ್ನ ಮನೆ. ಆ ಗುಡಿಯನ್ನು ಕಟ್ಟಿದ್ದು ನಾನು. ಈಗ ನಂಗೇನಾಗಬೇಕು ನನ್ನದು ಇದುವೇ ಲಾಸ್ಟ್​ ಎಂದು ಹೇಳಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ರೋಹಿತ್​ ಶರ್ಮಾ ಮುಂಬರುವ ಆವೃತ್ತಿಯಲ್ಲಿ ಕಲ್ಕತ್ತಾ ಸೇರಲಿದ್ದಾರೆ ಎಂಬ ಮಾತಿಗೆ ಜೀವ ಬಂದಂತಾಗಿದೆ.

ಇನ್ನೂ ಈ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್, ನನ್ನ ಪ್ರಕಾರ ಮುಂದಿನ ಆವೃತ್ತಿಯಲ್ಲಿ ರೋಹಿತ್​ ಶರ್ಮಾ ಮುಂಬೈ ಬದಲು ಕೆಕೆಆರ್​ ಪರ ಆಡುವುದು ಸೂಕ್ತ ಎಂದು ಭಾವಿಸುತ್ತೇನೆ. ಏಕೆಂದರೆ ಗೌತಮ್​​ ಗಂಭೀರ್​​ ಮೆಂಟರಿಂಗ್, ಶ್ರೇಯಸ್​ ಅಯ್ಯರ್​ ನಾಯಕತ್ವದಲ್ಲಿ ಉತ್ತಮ ತಂಡವನ್ನು ಕಟ್ಟಬಹುದಾಗಿದೆ. ಯಾವುದೇ ಪಿಚ್​ ಆದರೂ ಉತ್ತಮವಾಗಿ ಆಟವಾಡುವ ರೋಹಿತ್​ ಶರ್ಮಾ ಮುಂದಿನ ಆವೃತ್ತಿಯಲ್ಲಿ ಕೋಲ್ಕತ ಪರ ಆಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vijayvani