Dailyhunt
ಶಾಸಕರ ಮನೆಗೆ ದಿಢೀರ್​ ಭೇಟಿ ನೀಡಿದ ನಟ ಅಲ್ಲು ಅರ್ಜುನ್; ಪ್ರಕರಣ ದಾಖಲು

ಶಾಸಕರ ಮನೆಗೆ ದಿಢೀರ್​ ಭೇಟಿ ನೀಡಿದ ನಟ ಅಲ್ಲು ಅರ್ಜುನ್; ಪ್ರಕರಣ ದಾಖಲು

ಮರಾವತಿ: ರಕ್ತಸಿಕ್ತ ರಾಜಕಾರಣಕ್ಕೆ ಹೆಸರುವಾಸಿಯಾಗಿರುವ ಆಂಧ್ರಪ್ರದೇಶದಲ್ಲಿ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಯ ಚುನಾವಣೆ ಭರಾಟೆ ಜೋರಾಗಿದ್ದು, ಇದೀಗ ಶಾಸಕರ ಮನೆಗೆ ಭೇಟಿ ನೀಡಿದರು ಎಂಬ ಕಾರಣಕ್ಕೆ ಟಾಲಿವುಡ್​ನ ಸ್ಟಾರ್​ ನಟ ಅಲ್ಲು ಅರ್ಜುನ್​ ವಿರುದ್ಧ ನಂದ್ಯಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನಂದ್ಯಾಳ ವಿಧಾನಸಭಾ ಕ್ಷೇತ್ರದ ವೈಎಸ್​ಆರ್​ಸಿಪಿ ಅಭ್ಯರ್ಥಿ ಶಿಲ್ಪಾ ರವಿ ಅವರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ನಟ ಅವರ ಮನೆಯಲ್ಲಿದ್ದಾರೆ ಎಂದು ವಿಷಯ ತಿಳದ ಜನ ಶಾಸಕರ ಮನೆ ಬಳಿ ಧಾವಿಸಿದರು. ಈ ವೇಳೆ ನಟ ಅಲ್ಲು ಅರ್ಜುನ್​ ಅಭಿಮಾನಿಗಳತ್ತ ಕೈ ಬೀಸಿ ನಮಸ್ಕರಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

VIDEO| ಮಗಳ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ ತಾಯಿ; ವಿಡಿಯೋ ಮಾಡುತ್ತ ಕುಳಿತ ತಂದೆ

ಈ ಕುರಿತು ಪ್ರತಿಕ್ರಿಯಿಸಿರುವ ಕ್ಷೇತ್ರ ಚುನಾವಣಾಧಿಕಾರಿ, ನಟ ಅಲ್ಲು ಅರ್ಜುನ್​ ಶಾಸಕರ ಮನೆಗೆ ಭೇಟಿ ನೀಡುವ ವಿಚಾರವಾಗಿ ಅಧಿಕಾರಿಗಳಿಂದ ಅನುಮತಿ ಪಡೆದಿರಲಿಲ್ಲ. ಬಹಿರಂಗ ಪ್ರಚಾರ ಮುಗಿದಿದ್ದರೂ ರೋಡ್​ ಶೋ ನಡೆಸಿ ಜನರನ್ನು ಉದ್ಧೇಶಿಸಿ ಮಾತನಾಡಿದ್ದಾರೆ. ಇದು ಕಾನೂನುಬಾಹಿರವಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ನಂದ್ಯಾಳ ಕ್ಷೇತ್ರ ಚುನಾವಣಾಧಿಕಾರಿ ತಿಳಿಸಿದ್ದಾರೆ.

175 ವಿಧಾನಸಭೆ ಹಾಗೂ 25 ಲೋಕಸಭೆ ಕ್ಷೇತ್ರಗಳಿಗೆ ಮೇ 13ರಂದು ಮತದಾನ ನಡೆಯಲಿದ್ದು, ಸಿಎಂ ಜಗನ್​ ಮೋಹನ್​ ರೆಡ್ಡಿ ನೇತೃತ್ವದ ವೈಎಸ್​ಆರ್​ ಕಾಂಗ್ರೆಸ್​ ಪಕ್ಷವು ಮರು ಆಯ್ಕೆ ಬಯಸಿದ್ದು, ಟಿಡಿಪಿ-ಜನಸೇನಾ-ಬಿಜೆಪಿ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿವೆ.

Dailyhunt
Disclaimer: This content has not been generated, created or edited by Dailyhunt. Publisher: Vijayvani