ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial ) ಕೆಡಿ ಜೈದೇವ್ ಕಥೆ ಅಯೋಮಯವಾಗಿದೆ. ಜೈದೇವ್ ಈಗ ಎರಡನೇ ಪತ್ನಿಯ ಮನೆಯಲ್ಲಿ ಕೆಲಸದಾಳಾಗಿದ್ದಾನೆ. ಜೈದೇವ್ (Jaidev) ಸ್ಥಿತಿ ನೋಡಿ ಶಾಕ್ ಆಗಿದ್ದಾನೆ ಶಕುನಿ ಮಾಮ.
ಜೈದೇವ್ ಇದೀಗ ತನ್ನ ಎರಡನೇ ಪತ್ನಿಯ ಮನೆಯಲ್ಲಿ ಕೆಲಸದಾಳಾಗಿದ್ದಾನೆ. ಜೈದೇವ್ಗೆ ಬೇಬಿ ಇನ್ನಷ್ಟು ಕೆಲಸ ಕೊಟ್ಟಿದ್ದಾಳೆ. ಅಷ್ಟೇ ಅಲ್ಲ ಕ್ಷಣ ಕ್ಷಣಕ್ಕೂ ಅವಮಾನ ಮಾಡುತ್ತಿದ್ದಾಳೆ. ಒಂದು ಸಿಗ್ರೇಟ್ಗೂ ಜೈದೇವ್ ದಿಯಾ ಬಳಿ (Dia) ಭಿಕ್ಷೆ ಬೇಡುತ್ತಿದ್ದಾನೆ. ಜೈದೇವ್ ಸ್ಥಿತಿಯನ್ನು ಶಕುನಿ ಮಾವ ಕಣ್ಣಾರೆ ಕಂಡು ಶಾಕ್ ಆಗಿದ್ದಾನೆ.
ಮಕ್ಕಳು ಕೊಡೋ ಕಾಟಕ್ಕೆ ಭೂಮಿ-ಗೌತಮ್ ಸುಸ್ತು
ಅಮೃತಧಾರೆ ಸೀರಿಯಲ್ನಲ್ಲಿ ಮಿಂಚು ಹಾಗೂ ಅಪ್ಪು ನಡುವಿನ ಮುದ್ದಿನ ಕಿತ್ತಾಟವು ಹೈಲೈಟ್ ಆಗಿದೆ. ಊಟದ ವಿಚಾರವಾಗಿ ಮತ್ತೆ ಕಿತ್ತಾಡಿಕೊಂಡಿದ್ದಾರೆ ಭೂಮಿ ಹಾಗೂ ಗೌತಮ್.
Kiara Advani: ಮಗಳು ಒಬ್ಬರ ಜೊತೆ ಮಾತ್ರ ಡೇಟಿಂಗ್ ಮಾಡ್ಬೇಕು; ಟೀಕೆಗೆ ಗುರಿಯಾದ ಕಿಯಾರಾ
ವೀಕ್ಷಕರು ಕನ್ಫ್ಯೂಸ್
ಅಮೃತಧಾರೆಯ ಹೊಸ ಎಪಿಸೋಡ್ಗಳು ಹಲವು ಕಾರಣಕ್ಕೆ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದೆ. ಮೊದಲನೆಯದಾಗಿ ಗೌತಮ್ ಹಾಗೂ ಭೂಮಿಕಾ ಅವರ ಮಗಳ ಪತ್ತೆಗೆ ಅಖಿಲಾಂಡೇಶ್ವರಿ ಅವರ ಅಭಯ ಹಸ್ತ ಸಿಕ್ಕಿದೆ. ಪೊಲೀಸ್ ಠಾಣೆಗೆ ಬಂದು ಮಾವ ಜಾಮೀನು ಕೊಡಿಸಲು ಮುಂದಾಗಿದ್ದರೂ, ಜೈದೇವ್ ಇದಕ್ಕೆ ಸಮ್ಮತಿ ಸೂಚಿಸಿಲ್ಲ. ಆದರೂ ಮಾವ ಬಿಡಿಸಿಕೊಂಡು ಹೋಗಿರೊದಕ್ಕೆ ಮಾವ ಹಾಗೂ ಶಕುಂತಲಾ ತಮ್ಮ ಹಳೆ ಚಾಳಿ ಮುಂದುವರಿಸಿದ್ದಾರೆ ಅಂತ ಕಮೆಂಟ್ ಕೂಡ ಮಾಡುತ್ತಿದ್ದಾರೆ.

